Advertisement

ಆರೋಗ್ಯ ಸಮಸ್ಯೆ: ಆಸ್ಪತ್ರೆಗೆ ದಾಖಲಾದ ಕರುಣಾನಿಧಿ 

09:44 AM Aug 16, 2017 | |

ಚೆನ್ನೈ: ಡಿಎಂಕೆ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರು ಬುಧವಾರ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 

Advertisement

ಸ್ವಲ್ಪ ಮಟ್ಟಿನ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೆಲವು ಪರೀಕ್ಷೆಗಳ ಬಳಿಕ ಇಂದೇ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. 94 ರ ಹರೆಯದ ಕರುಣಾನಿಧಿ ಅವರು ತಿರುವಾರೂರ್‌ನ ಶಾಸಕರಾಗಿದ್ದಾರೆ. 

ತಿರುವಾರೂರ್‌ನಲ್ಲಿ  ಅಗಸ್ಟ್‌ 19 ರಂದು ಎಐಎಡಿಎಂಕೆ ಸರ್ಕಾರ ಆಯೋಜಿಸಿರುವ ಕರುಣಾನಿಧಿ ಅವರ ಗೆಳೆಯ ಎಂ.ಜಿ.ರಾಮಚಂದ್ರನ್‌ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮುಖ್ಯ ಅತಿಥಿಗಳ ಹೆಸರಿನಲ್ಲಿ ಕರುಣಾನಿಧಿ ಅವರ ಹೆಸರು ಇದೆ. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಅವರು ಭಾಗಿಯಾಗಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next