Advertisement

ಕೈ ಗೆಲುವಿಗಾಗಿ ನೋಣವಿನಕೆರೆ ಮಠದಲ್ಲಿ ಸಚಿವ ಡಿಕೆಶಿ ವಿಶೇಷ ಹೋಮ 

05:39 PM Oct 23, 2018 | Team Udayavani |

ತುಮಕೂರು :ರಾಜ್ಯದ ಮೈತ್ರಿ ಸರಕಾರದ ಸುಭದ್ರತೆಗೆ ಮತ್ತು ಉಪಚುನಾವಣೆಯಲ್ಲಿ ಗೆಲುವಿಗಾಗಿ  ತಿಪಟೂರು ತಾಲೂಕಿನ ನೋಣವಿನಕೆರೆ ಶ್ರೀ ಕಾಡಸಿದ್ದೇಶ್ವರ ಮಠದಲ್ಲಿ ಸಚಿವ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ವಿಶೇಷ ಹೋಮ ಮತ್ತು ಪೂಜೆ ಸಲ್ಲಿಸಿದ್ದಾರೆ. 

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಿಕೆಶಿ ಉಪಚುನಾವಣೆಯಲ್ಲಿ ಎಲ್ಲಾ ಸ್ಥಾನಗಳಲ್ಲಿ ಮೈತ್ರಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದರು. 

ಈ ಪೀಠ ನನಗೆ ಶಕ್ತಿ ನೀಡಿದೆ ಹಾಗಾಗಿ ಇಲ್ಲಿಗೆ ಆಗಮಿಸಿ ವಿಶೇಷ ಪೂಜೆ ಮತ್ತು ವಿನಾಯಕನಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.

ಏನು ಪ್ರಾರ್ಥನೆ ಮಾಡಿದ್ದೇನೆ ಎನ್ನುವುದು ದೇವರು ಮತ್ತು ಭಕ್ತನಿಗೆ ಮಾತ್ರ ಗೊತ್ತಿರುತ್ತದೆ. ಸಹಜವಾಗಿ ನಾನು ಸರ್ಕಾರದ ಭಾಗವಾಗಿ ಸುಭದ್ರತೆಗಾಗಿ ಪ್ರಾರ್ಥಿಸಿದ್ದೇನೆ, ಬಳ್ಳಾರಿಯ ಅಭ್ಯರ್ಥಿ ಉಗ್ರಪ್ಪ ಪರ ಸಂಕಲ್ಪ ಮಾಡಿದ್ದೇನೆ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next