Advertisement

ಡಿಕೆಶಿ ಮುಂದಿನ ಸಿಎಂ: ಪಾಪಣ್ಣ

05:15 AM Jul 03, 2020 | Lakshmi GovindaRaj |

ಭಾರತೀನಗರ: ಚಂದೂಪುರ ಗ್ರಾಮದಲ್ಲಿ ನಡೆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಪ್ರತಿಜ್ಞಾ ವಿಧಿ ನೇರ ಪ್ರಸಾರ ಕಾರ್ಯಕ್ರಮವನ್ನು ಜಿಪಂ ಮಾಜಿ ಸದಸ್ಯ ಚಂದೂಪುರ ಪಾಪಣ್ಣ ಉದ್ಘಾಟಿಸಿದರು.  ಈ ಸಂದರ್ಭ ಮಾತನಾಡಿದ ಅವರು, ಡಿಕೆಶಿ ಅವರು ಕೆಪಿಸಿಸಿ ಅಧ್ಯಕ್ಷರಾಗಿ  ರುವುದು ಪಕ್ಷಕ್ಕೆ ಆನೆಬಲ ಬಂದಂತಾಗಿದೆ.

Advertisement

ಮುಂದಿನ ಚುನಾವಣೆ ಯಲ್ಲಿ ಕಾಂಗ್ರೆಸ್‌ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಮೂಲಕ ಡಿಕೆಶಿ ಅವರು ಮುಖ್ಯಮಂತ್ರಿ  ಯಾಗಲಿದ್ದಾರೆ  ಎಂದು ಭವಿಷ್ಯ ನುಡಿದರು. ಕಾಂಗ್ರೆಸ್‌ ಕಾರ್ಯಕರ್ತರು ಗ್ರಾಮ ಮಟ್ಟದಿಂದ ಪಕ್ಷವನ್ನು ಸಂಘಟಿ ಸಲು ಮುಂದಾಗಬೇಕು. ಕಾರ್ಯ ಕರ್ತರು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಮನವಿ  ಮಾಡಿದರು.

ಕೆ.ಎಂ. ದೊಡ್ಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಚಿಕ್ಕರಸಿನಕೆರೆ, ಅಣ್ಣೂರು, ಕೆ.ಎಂ.ದೊಡ್ಡಿ, ಅಣ್ಣೂರು, ಕ್ಯಾತಘಟ್ಟ, ಚಿಕ್ಕರಸಿನಕೆರೆ ಸೇರಿದಂತೆ ಒಟ್ಟು 16 ಕಡೆ ಡಿಕೆಶಿ ಅವರ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ನೇರ ಪ್ರಸಾರವನ್ನು  ಆಯೋಜಿಸಲಾಗಿತ್ತು. ಮುಖಂಡರಾದ ಪುಟ್ಟೇಗೌಡ, ಮಲ್ಲೇಗೌಡ, ಪುಟ್ಟಸ್ವಾಮಿ, ಜುಂಜೇಗೌಡ, ವಿಶ್ವ, ಉಮೇಶ, ಶೇಖರ್‌, ಮಲ್ಲೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next