Advertisement

Politics: “ಡಿಕೆಶಿ ಸಿಎಂ” ಚರ್ಚೆ ಅನವಶ್ಯಕ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

10:23 PM Sep 24, 2023 | Team Udayavani |

ಬಾಗಲಕೋಟೆ: ಸದ್ಯ ಉಪಮುಖ್ಯಮುಂತ್ರಿ ಆಗಿರುವ ಡಿ.ಕೆ.ಶಿವಕುಮಾರ್‌ ಮುಖ್ಯಮಂತ್ರಿಯಾಗಬೇಕು ಎಂಬ ಚರ್ಚೆ ಅನವಶ್ಯಕ. ಅದೆಲ್ಲ ನಮ್ಮ ಪಕ್ಷದ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಸರಕಾರ ಸುಸೂತ್ರವಾಗಿ ನಡೆಯುತ್ತಿದೆ. ನಾನು ಡಿಸಿಎಂ ಸ್ಥಾನ ಬೇಕೆಂದು ಕೇಳುವುದಿಲ್ಲ. ಮಂತ್ರಿ ಮಾಡಿ ಎಂದು ಯಾರನ್ನೂ ಕೇಳಿಲ್ಲ ಎಂದರು.

ಜೆಡಿಎಸ್‌-ಬಿಜೆಪಿ ಅಧಿಕಾರಕ್ಕಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿವೆ. ಇದರಿಂದ ನಮ್ಮ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ನಮ್ಮ ಪಕ್ಷಕ್ಕೆ ಈ ಬಾರಿ 20 ಸ್ಥಾನ ಬಂದೇ ಬರುತ್ತವೆ ಎಂದರು.

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬುರುಡೆ ಬಿಡುವುದು ನಿಲ್ಲಿಸಬೇಕು. ಇಡೀ ರಾಜ್ಯದಲ್ಲಿ ನೋಂದಣಿ ಮಾಡಿಸಿಕೊಂಡ ಯಾವ ಮಹಿಳೆಯೂ ಹಣ ಬಂದಿಲ್ಲ ಎಂದು ಹೇಳಿಲ್ಲ. ಬೊಮ್ಮಾಯಿ ಅವರೇ ಹೇಳುತ್ತಿದ್ದಾರೆ. ಅವರು ಬುರುಡೆ ಬಿಡುವುದರಲ್ಲಿ ನಿಸ್ಸೀಮರು. ಬಿಜೆಪಿಯವರು ಎಡಬಿಡಂಗಿ ನಾಯಕರು. ಅವರ ಮಾತನ್ನು ಯಾರೂ ಕೇಳಬೇಡಿ. ರಾಜ್ಯದ ಬಿಜೆಪಿ ನಾಯಕರಿಗೆ ತಮ್ಮದೇ ಪ್ರಧಾನಿ ಎದುರು ಮಾತನಾಡುವ ತಾಕತ್ತಿಲ್ಲ. ಸುಮ್ಮನೆ ಮಾಧ್ಯಮದವರ ಎದುರು ಮಾತ್ರ ಮಾತನಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next