Advertisement

ಜಯಚಂದ್ರರಿಗೆ ಟಿಕೆಟ್‌: ಹೈಕಮಾಂಡ್‌ ಆಕ್ಷೇಪವಿತ್ತೇ ?

03:27 PM Oct 09, 2020 | mahesh |

ಬೆಂಗಳೂರು: ಸುರ್ಜೇವಾಲ, ರಾಜೇಶ್‌ ಗೌಡಗೆ ಕೊಡಬಹುದಿತ್ತು ಅಲ್ವಾ ಅಂದ್ರು…. ಅವ್ನು ದಳದಲ್ಲೂ ಟಿಕೆಟ್‌ ಕೇಳ್ತಿದ್ದ, ಬಿಜೆಪಿಯಲ್ಲೂ ಕೇಳ್ತಿದ್ದ, ಸುಮ್ನೆ ನಾಮಕಾವಸ್ತೆಗೆ ನಮ್ಮಲ್ಲಿದ್ದ….

Advertisement

ಉಪ ಚುನಾವಣೆಯ ಬಿಸಿ ಏರುತ್ತಿರುವ ಹೊತ್ತಿನಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ನಡುವಿನ ಸಂಭಾಷಣೆ ಯದ್ದು ಎನ್ನಲಾದ ಇಂಥದ್ದೊಂದು ವೀಡಿಯೋ ಬಹಿರಂಗಗೊಂಡಿದೆ. ಶಿರಾ ಕ್ಷೇತ್ರದಲ್ಲಿ ಟಿ.ಬಿ. ಜಯಚಂದ್ರರಿಗೆ ಟಿಕೆಟ್‌ ಕೊಡುವ ವಿಚಾರದಲ್ಲಿ ಹೈಕಮಾಂಡ್‌ ಹಾಗೂ ರಾಜ್ಯ ಕಾಂಗ್ರೆಸ್‌ ನಾಯಕರ ನಡುವೆ ಗೊಂದಲ ಇರುವ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಸಂಭಾಷಣೆ ವಿವರ
ಡಿಕೆಶಿ: ಸಾಹೇಬ್ರು ಕಾಲ್‌ ಮಾಡಿದ್ರು, ಜಯಚಂದ್ರರಿಗೆ ಕೊಡಬಾರದಾಗಿತ್ತು, ರಾಜೇಶ್‌ ಗೌಡರಿಗೆ ಕೊಡಬೇಕಿತ್ತು. 1979ರಿಂದ ಅವ್ರಿಗೆ ಟಿಕೆಟ್‌ ಕೊಡ್ತಿದ್ದೀರಾ. ಈಗಾಗಲೇ 9 ಬಾರಿ ಟಿಕೆಟ್‌ ಕೊಟ್ಟಿದ್ದೇವೆ. ಮತ್ತೆ ಅವರನ್ನೇ ಆಯ್ಕೆ ಮಾಡುತ್ತಿದ್ದೀರಾ? ನಿಮಗೇನು ಕಾಮನ್ಸೆನ್ಸ್‌ ಇಲ್ವಾ?

ಸಿದ್ದರಾಮಯ್ಯ: ಯಾರು ಹೇಳಿದ್ದು?
ಡಿಕೆಶಿ: ಅವ್ರೇ ಸುರ್ಜೇವಾಲ. ರಾಜೇಶ್‌ ಗೌಡರಿಗೆ ಕೊಡಬಹುದಿತ್ತು ಅಲ್ವಾ ಅಂದ್ರು. ನಾವು ಕೂತ್ಕೊಂಡು ಮಾತಾಡಿದ್ವಿ, ಹಾಗೆಲ್ಲ ಮಾಡಕ್ಕೆ ಆಗಲ್ಲ ಅಂತ. ಈಗ ಯೋಚನೆ ಮಾಡಿ ನೋಡು ಅಂದ್ರು.

ಸಿದ್ದರಾಮಯ್ಯ: ಅವ್ನು ಬಿಜೆಪಿ ಸೇರಿ ಆಯ್ತಲ್ವ?
ಡಿಕೆಶಿ: ನಾನು ಹೇಳಿದೆ ಅವ್ರು ಬಿಜೆಪಿ ಸೇರಿದ್ರು ಅಂತ. ಲಾಸ್ಟ್‌ ಟೈಮೂ ದಳಕ್ಕೇ ಕೆಲಸ ಮಾಡಿದ್ರು ಅಂತ.

Advertisement

ಸಿದ್ದರಾಮಯ್ಯ: ಅವ್ನು ದಳದಲ್ಲೂ ಟಿಕೆಟ್‌ ಕೇಳ್ತಿದ್ದ, ಬಿಜೆಪಿಯಲ್ಲೂ ಕೇಳ್ತಿದ್ದ, ಸುಮ್ನೆ ನಾಮಕಾವಸ್ತೆಗೆ ನಮ್ಮಲ್ಲಿದ್ದ.
ಡಿಕೆಶಿ : ಹೇಳ್ದೆ, ನಾನು ಹೇಳ್ದೆ.
ಸಿದ್ದರಾಮಯ್ಯ : ಆಗಲ್ಲ ಆಗಲ್ಲ.

ಡಿಕೆಶಿ: ಈಗ ಫ್ಯಾಕ್ಸ್‌ ಹೋಗಿದೆ, ಅದನ್ನು ನೋಡಿ ಈಗ ಹೇಳ್ತಿದ್ದಾರೆ.
ಸಿದ್ದರಾಮಯ್ಯ : ಆಗಲ್ಲ ಆಗಲ್ಲ
ಡಿಕೆಶಿ: ಅಲ್ಲ, ನಿಮ್ಮ ಗಮನಕ್ಕೆ ತರ್ತಿದ್ದೀನಿ ಅಷ್ಟೇ.

Advertisement

Udayavani is now on Telegram. Click here to join our channel and stay updated with the latest news.

Next