Advertisement

ಟೆಂಡರ್‌ ಅಕ್ರಮದ  ಚರ್ಚೆಗೆ ಡಿಕೆಶಿ ಆಹ್ವಾನ

12:28 PM Mar 07, 2017 | Team Udayavani |

ಬೆಂಗಳೂರು: “ಸೌರವಿದ್ಯುತ್‌ ಉತ್ಪಾದನಾ ಯೋಜನೆ ಟೆಂಡರ್‌ನಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಸಚಿವರಾದ ಸಿ.ಟಿ.ರವಿ ಹಾಗೂ ಸುರೇಶ್‌ಕುಮಾರ್‌ ಮಾಡಿರುವ ಆರೋಪದ ಬಗ್ಗೆ ಯಾವುದೇ ತನಿಖೆ ಎದುರಿಸಲು ನಾನು ಸಿದ್ಧ,” ಎಂದು ಹೇಳಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌, ಈ ಬಗ್ಗೆ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ.

Advertisement

ಸೋಮವಾರ ಸುದ್ದಿ ಗೋಷ್ಠಿ­ಯಲ್ಲಿ ಮಾತ ನಾಡಿದ ಅವರು, ಆಪ್ತರಿಗೆ ಅಂತಾರಾಷ್ಟ್ರೀಯ ಕಂಪನಿ ಮೂಲಕ ಕಲ್ಲಿದ್ದಲು ಖರೀದಿಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದಾಗಿ ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. 2008 ರಿಂದ ಅಂತಾರಾಷ್ಟ್ರೀಯ ಸಂಸ್ಥೆಗ ಳಿಂದ ಕಲ್ಲಿದ್ದಲು ಖರೀದಿ ಮಾಡಲಾ ಗುತ್ತಿದ್ದು, ರಾಜ್ಯ ಸರ್ಕಾರ ಯಾವುದೇ ಖಾಸಗಿ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಎಂಎಸ್‌ಡಿಸಿ ಸಂಸ್ಥೆ ಜೊತೆ ಮಾತ್ರ ಒಡಂಬಡಿಕೆ ಮಾಡಿ­ಕೊಳ್ಳಲಾಗಿದೆ.

ನಮ್ಮ ಕಾರ್ಯ ಕರ್ತರ ಇಂಡೊನೇಷಿಯಾ ಕಂಪನಿ ಯಾವುದು ಎಂದು ಸಾಬೀತು ಪಡಿ­ಸಿದರೆ, ಆ ಕಂಪನಿಯನ್ನು  ಬಿಜೆಪಿಗೆ ಉಚಿತವಾಗಿ ನೀಡುತ್ತೇನೆ ಎಂದು ಹೇಳಿದರು. ಪಾವಗಡ ಸೋಲಾರ್‌ ಪ್ಲಾಂಟ್‌ಗೆ ರೈತರಿಂದ ಜಮೀನು ಖರೀದಿ ಮಾಡದೇ ಅವರನ್ನೇ ಮಾಲೀಕರನ್ನಾಗಿ ಮಾಡಿ, ರೈತರಿಗೂ ಲಾಭವಾಗುವ ರೀತಿ ಯೋಜನೆ ರೂಪಿಸಲಾಗಿದೆ ಎಂದರು. 

ನನ್ನೊಂದಿಗೆ ಆಟವಾಡಲು ಬಂದ್ರೆ ಸರಿ ಇರಲ್ಲ 
“ಸಿಟಿ ರವಿ ನನ್ನ ವಿರುದ್ಧ ದಾಖಲೆ ರಹಿತ ಆರೋಪ ಮಾಡಿದ್ದಾರೆ. ಬೇರೆ ರಾಜಕಾರಣಿಗಳ ಜೊತೆ ಆಡಿದಂತೆ ನನ್ನ ಜೊತೆ ಮಕ್ಕಳಾಟ ಆಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ,” ಎಂದರು. “ನಾನು ರಾಜಕೀಯದಲ್ಲಿ ದೊಡ್ಡ ಕನಸು ಇಟ್ಟುಕೊಂಡು ಬಂದವನು. ಕನಕಪುರದಿಂದ ಕಷ್ಟಪಟ್ಟು ಬೆಂಗಳೂರಿಗೆ ಬಂದು ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೂತಿದ್ದೇನೆ. ನನಗೆ ರಾಜಕೀಯ ಭವಿಷ್ಯದ ಬಗ್ಗೆ ಕನಸುಗಳಿವೆ. ನನ್ನ ವಿರುದ್ಧ ಅನಗತ್ಯ ಆರೋಪ ಮಾಡುವುದನ್ನು ನಾನು ಸಹಿಸುವುದಿಲ್ಲ,” ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next