Advertisement

ಡಿಕೆಶಿ CM ಆಗಿದ್ದರೆ ಬೆಳಗಾವಿಯನ್ನು ಮಾರುತ್ತಿದ್ದರು: ರಮೇಶ ಜಾರಕಿಹೊಳಿ

11:33 PM Jan 21, 2024 | Team Udayavani |

ಕಾಗವಾಡ: ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಲೂ ನನ್ನ ನಾಯಕರು ಹಾಗೂ ಅವರು ಉತ್ತಮ ಮುಖ್ಯಮಂತ್ರಿ. ಆದರೆ ಕೊತ್ವಾಲನ ಶಿಷ್ಯ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಆಡಳಿತ ವ್ಯವಸ್ಥೆ ಬದಲಾಗಿದೆ.

Advertisement

ಒಂದು ವೇಳೆ ಡಿ.ಕೆ.ಶಿವಕುಮಾರ್‌ ಸಿಎಂ ಆಗಿದ್ದರೆ ವಿಷಕನ್ಯೆ ಮತ್ತು ಡಿಕೆಶಿ ಕೂಡಿ ಬೆಳಗಾವಿ ಜಿಲ್ಲೆಯನ್ನೇ ಮಾರಾಟ ಮಾಡುತ್ತಿದ್ದರು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಕಾಂಗ್ರೆಸ್‌ ದುರಾಡಳಿತವನ್ನು ಖಂಡಿಸಿ ಮಾಜಿ ಸಚಿವ ಶ್ರೀಮಂತ ಪಾಟೀಲ ನೇತೃತ್ವದಲ್ಲಿ ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ ರವಿವಾರ ಹಮ್ಮಿಕೊಂಡಿದ್ದ ಬಿಜೆಪಿ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next