Advertisement

ಬೊಮ್ಮಾಯಿ ಅವರದ್ದು ಬಂಡಲ್‌, ಬೋಗಸ್‌ ಬಜೆಟ್‌

01:09 PM Mar 05, 2022 | Team Udayavani |

ಕನಕಪುರ: ಸಿಎಂ ಬೊಮ್ಮಾಯಿ ಶುಕ್ರವಾರ ಮಂಡಿಸಿರುವುದು ಬಂಡಲ್‌, ಬೋಗಸ್‌ ಬಜೆಟ್‌ ಎಂದು ಸಂಸದ ಡಿ.ಕೆ. ಸುರೇಶ್‌ ಟೀಕಿಸಿದ್ದಾರೆ.

Advertisement

ರಾಜ್ಯ ಬಜೆಟ್‌ಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಬೊಮ್ಮಾಯಿ ರಾಜ್ಯ ಬಜೆಟ್‌ ಬದಲು ಕೇಂದ್ರದ ಬಜೆಟ್‌ ಪ್ರಸೆಂಟ್‌ ಮಾಡಿದ್ದಾರೆ ಎಂದು ವ್ಯಂಗ್ಯ ವಾಡಿದ್ದಾರೆ.

ವಿತ್ತೀಯ ಕೊರತೆ ನೀಗಿಲು ಯಾವುದೇ ಪ್ರಸ್ತಾವನೆ ಇಲ್ಲ. ಕಳೆದ ಬಾರಿನೂ ಸಾಲ ಮಾಡಿದ್ರು. ಈಬಾರಿನೂ ಸಾಲ ಮಾಡುವುದಾಗಿ ಘೋಷಿಸಿದ್ದಾರೆ.ಕೇಂದ್ರದಿಂದ ಬರಬೇಕಾದ 18 ಸಾವಿರ ಕೋಟಿ ರೂ. ಮೇಲೆ ಸಾಲ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.

ರೈತರಿಗೆ ಅನುಕೂಲವಾಗುವ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ.ಮೇಕೆದಾಟು, ಎತ್ತಿನಹೊಳೆ ಹಾಗೂ ಕಳಸ ಬಂಡೂರಿಗೆ ಹಣ ಇಟ್ಟಿದ್ದಾರೆ. ಆದ್ರೆ ಕಳೆದ ಬಾರಿ ಮೇಕೆದಾಟು ಹೊರತು ಪಡಿಸಿಬಜೆಟ್ನಲ್ಲಿ ಇಟ್ಟ ಹಣ ಬಿಡುಗಡೆ ಮಾಡಿಲ್ಲ.ಇದೊಂದುದಾರಿ ತಪ್ಪಿಸುವಂತ ಬಜೆಟ್‌. ಪಾದಯಾತ್ರೆ ಮಾಡಿದ್ದಕ್ಕೆ ಮೇಕೆದಾಟು ಯೋಜನೆಗೆ ಸಾವಿರ ಕೋಟಿ ಇಟ್ಟಿದ್ದಾರೆ. ಆದ್ರೆ ನಾವು ಪಾದಯಾತ್ರೆ ಮಾಡಿದ್ದು ಪರಿಸರ ಇಲಾಖೆ ಅನುಮತಿಯನ್ನು ಕೇಂದ್ರಕ್ಕೆ ಹೋಗಿ ತನ್ನಿ ಎಂದು.ಆದರೆ ಇವರು ಇಟ್ಟ ಹಣ ಒಂದು ನಯಾ ಪೈಸೆ ಖರ್ಚು ಆಗೋದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next