Advertisement

ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಕ್ಷಮೆಯಾಚಿಸಿದ ಡಿಕೆ ಶಿವಕುಮಾರ್!

05:33 PM Aug 05, 2017 | Sharanya Alva |

ಬೆಂಗಳೂರು: ನನ್ನ ಹಾಗೂ ಕುಟುಂಬಸ್ಥರು, ಆಪ್ತರ ನಿವಾಸ, ಕಚೇರಿ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ನನ್ನ ತಾಯಿ ಗೌರಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ವ್ಯಕ್ತಪಡಿಸಿದ ಪ್ರತಿಕ್ರಿಯೆ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸುವುದಾಗಿ ಸಚಿವ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Advertisement

ತಾಯಿ ಗೌರಮ್ಮ ಉದ್ದೇಶಪೂರ್ವಕವಲ್ಲದೆ ಆಡಿರುವ ಮಾತುಗಳ ಬಗ್ಗೆ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಕೆಲವು ಮಾಧ್ಯಮಗಳು ನನ್ನ ತಾಯಿಯನ್ನು ಪ್ರಚೋದಿಸಿವೆ. ನನ್ನ ತಾಯಿ ವಿದ್ಯಾವಂತರಲ್ಲ, ಐಟಿ ಇಲಾಖೆ ಯಾವ ಸರ್ಕಾರದ ಅಧೀನದಲ್ಲಿ ಬರುತ್ತದೆ ಎಂಬ ತಿಳಿವಳಿಕೆ ಇಲ್ಲ. ಪುತ್ರ ವಾತ್ಸಲ್ಯದಿಂದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಡಿಕೆಶಿ ಸಮಜಾಯಿಷಿ ನೀಡಿದ್ದಾರೆ.

ಕೆಲವು ಮಾಧ್ಯಮಗಳಿಂದ ನನ್ನ ತಾಯಿಯನ್ನು ದುರ್ಬಳಕೆ ಮಾಡಿಕೊಂಡಿರುವುದಾಗಿ ಡಿಕೆಶಿ ಅವರು ಬಿಡುಗಡೆಗೊಳಿಸಿರುವ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಮಾಧ್ಯಮಗಳ ವರದಿ ಹೇಳಿದೆ. ಈ ಸಂದರ್ಭದಲ್ಲಿ ತನಗೆ ಸಾಂತ್ವನ ಹೇಳಿದ ಕಾರ್ಯಕರ್ತರು, ಹಿರಿಯರು, ಪಕ್ಷದ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next