Advertisement

ಕುಂದಗೋಳದಲ್ಲಿ ಡಿಕೆಶಿ ಆಟ ನಡೆಯದು

01:35 AM May 17, 2019 | Sriram |

ಹುಬ್ಬಳ್ಳಿ: ‘ಕಾಂಗ್ರೆಸ್‌ನವರು ಅಭಿವೃದ್ಧಿ ಪರ ಮತಯಾಚಿಸುತ್ತಿಲ್ಲ. ಸಚಿವ ಡಿ.ಕೆ. ಶಿವಕುಮಾರ್‌ ಕುಂದಗೋಳ ಕ್ಷೇತ್ರಕ್ಕೆ ಬಂದು ಬೂಟಾಟಿಕೆ ಮಾಡುತ್ತಿದ್ದಾರೆ. ಅವರ ಆಟ ಇಲ್ಲಿ ನಡೆಯಲ್ಲ’ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ತಿಳಿಸಿದರು.

Advertisement

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕಾಂಗ್ರೆಸ್‌ನವರು ಜಾತಿ ವಿಷ ಬೀಜ ಬಿತ್ತುತ್ತಿದ್ದಾರೆ. ಕ್ಷೇತ್ರದಲ್ಲಿ ಹಣ ಹಂಚುತ್ತಿದ್ದಾರೆ. ಬುಧವಾರ ಒಂದೇ ದಿನಕ್ಕೆ ಐದು ಕೋಟಿ ರೂ. ಹಣ ಸೇರ್ಪಡೆಯಾಗಿದೆ. ಎರಡೂ ಉಪಚುನಾವಣೆಗಳಲ್ಲಿ ನೀರಿನಂತೆ ಹಣ ಖರ್ಚು ಮಾಡುತ್ತಿದ್ದಾರೆ. ಲೂಟಿ ಹೊಡೆದ ಹಣದಲ್ಲಿ ಚುನಾವಣೆ ಮಾಡುತ್ತಿದ್ದಾರೆ.

ಸಚಿವರ ಬೆಂಗಾವಲು ಸ್ಥಗಿತಗೊಳಿಸಬೇಕು’ ಎಂದರು. ರೇವಣ್ಣನ ಯಾವ ನಿಂಬೆ ಹಣ್ಣಿನ ಮಾಟ-ವಾಮಾಚಾರ ಇಲ್ಲಿ ನಡೆಯಲ್ಲ. ಜಮೀರ್‌ ಅಹ್ಮದ್‌ ನಾಲಿಗೆಗೆ ಲಗಾಮು ಇಲ್ಲ. ಅವರು ಏನೆಂದು ನನಗೆ ಚೆನ್ನಾಗಿ ಗೊತ್ತು. ಬಿಜೆಪಿಯಲ್ಲಿ ಯಡಿಯೂರಪ್ಪ ಒಬ್ಬರೇ ಪ್ರಶ್ನಾತೀತ ನಾಯಕ. ಕುಂದಗೋಳ ವಿಧಾನಸಭಾ ಮತಕ್ಷೇತ್ರದಲ್ಲಿ ಬಿಜೆಪಿ ಪರ ಒಲವಿದೆ ಎಂದರಲ್ಲದೆ, ನರೇಂದ್ರ ಮೋದಿ ಎರಡನೇ ಬಾರಿ ಪ್ರಧಾನಿಯಾಗಿಯಾಗುವ ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next