Advertisement

ಬಿಜೆಪಿಯವರದ್ದು ನಾಲ್ಕು ಎಂಜಿನ್‌ ಸರ್ಕಾರ

10:04 PM Jan 12, 2023 | Team Udayavani |

ಬೆಂಗಳೂರು: ಬಿಜೆಪಿ ಅವರದ್ದು ಬರೀ ಡಬಲ್‌ ಇಂಜಿನ್‌ ಸರ್ಕಾರ ಅಲ್ಲ, ಮಹದಾಯಿ ವಿಚಾರದಲ್ಲಿ ನಾಲ್ಕು ಇಂಜಿನ್‌ನ ಸರ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಲೇವಡಿ ಮಾಡಿದ್ದಾರೆ.

Advertisement

ಹುಬ್ಬಳ್ಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್‌ ಶೋ ವಿಚಾರದ ಬಗ್ಗೆ ಸುದ್ದಿಗಾರರ ಜತೆ ಮಾತನಾಡಿ, ಅವರು ಎಂಟು ಕಿ.ಮೀ. ರೋಡ್‌ ಶೋ ಆದರೂ ಮಾಡಲಿ, ಹತ್ತಾದರೂ ಮಾಡಲಿ, ನಾವು ಕೂಡ 500 ಕಿಮೀ ನಡೆದಿದ್ದೇವೆ, ಮೇಕೆದಾಟುಗಾಗಿ 150 ಕಿಮೀ ಪಾದಯಾತ್ರೆ ಮಾಡಿದ್ದೇವೆ. ಅವರೊಂದು ಉದ್ದೇಶಕ್ಕೆ ನಡೆದಿದ್ದಾರೆ. ನಾವೊಂದು ಉದ್ದೇಶಕ್ಕೆ ನಡೆದಿದ್ದೇವೆ. ಆದರೆ ಮಹದಾಯಿ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಅವರು ಉತ್ತರ ಕೊಡಲಿ ಎಂದು ಹೇಳಿದರು.

ಸುಮಲತಾ ಬಗ್ಗೆ ಮಾತನಾಡೋಲ್ಲ: ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‌ ಜತೆ ರಾಜಕೀಯ ಹೊಂದಾಣಿಕೆ ಬಗ್ಗೆ ಡಿ.ಕೆ.ಶಿವಕುಮಾರ್‌ ಅವರು ನನ್ನ ದೂರುತ್ತಿದ್ದಾರೆ ಎಂಬ ಸಂಸದೆ ಸುಮಲತಾ ಅಂಬರೀಶ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪಾಪ ಆ ಹೆಣ್ಣಮಗಳ ಬಗ್ಗೆ ಮಾತಾಡಿಲ್ಲ ಕಣಿÅ. ಯಾಕೆ ಆ ಹೆಣ್ಣಮಗಳ ಬಗ್ಗೆ ಮಾತಾಡೋಣ, ಮೈ ಸಿಸ್ಟರ್‌ ಪಾರ್ಲಿಮೆಂಟ್‌ ಮೇಂಬರ್‌. ನಾನು ಒಂದು ದಿನವೂ ಅವರ ಬಗ್ಗೆ ಮಾತಾಡಿಯೇ ಇಲ್ಲ ಎಂದರು.

ಚಿತ್ರ ನಟ ಸುದೀಪ್‌ ಅವರನ್ನ ಕಾಂಗ್ರೆಸ್‌ಗೆ ಆಹ್ವಾನಿಸುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ, ಕಾಂಗ್ರೆಸ್‌ ನಾಯಕತ್ವದಲ್ಲಿ ಯಾರಿಗೆಲ್ಲ ನಂಬಿಕೆಯಿದೆ, ಅವರನ್ನೆಲ್ಲ ಆಹ್ವಾನಿಸುತ್ತೇವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next