Advertisement

ಸಿಎಂ ಬದಲಾವಣೆ ಸುದ್ದಿಯ ಮೂಲ ಸ್ವತಃ ಬಿಜೆಪಿಯೇ : ಡಿ.ಕೆ. ಶಿವಕುಮಾರ್

11:13 AM Aug 10, 2022 | Team Udayavani |

ಬೆಂಗಳೂರು: ‘ಮುಖ್ಯಮಂತ್ರಿ ಬದಲಾವಣೆ’ ಸುದ್ದಿಯ ಮೂಲ ಸ್ವತಃ ಬಿಜೆಪಿ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.

Advertisement

ಆರ್.ಆರ್. ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬಿಜೆಪಿ, ಶಾಸಕರು, ಸಂಸದರು,  ಮಾಜಿ ಸಚಿವರು ಆಡಿದ ಮಾತುಗಳನ್ನೇ ಕಾಂಗ್ರೆಸ್ ‘ಪಿಕ್’ ಮಾಡಿ ಟ್ವೀಟ್ ಮಾಡಿದೆ ಅಷ್ಟೇ. ಹಾಗಾಗಿ, ಆ ಸುದ್ದಿಯ ಮೂಲ ಬಿಜೆಪಿಯೇ ಆಗಿದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ

ಸಿಎಂ ಬದಲಾವಣೆ ವಿಚಾರ ತಮಗೆ ಮಾಹಿತಿ ಇಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರಲ್ಲ ಎಂದಾಗ, ‘ಒಬ್ಬೊಬ್ಬರಿಗೆ ಒಂದೊಂದು ರೀತಿ ಮಾಹಿತಿ ಇರುತ್ತದೆ. ಅವರೂ ನಿನ್ನೆ (ಮಂಗಳವಾರ) ಈ ಬಗ್ಗೆ ಮಾತನಾಡಿದ್ದಾರೆ ಎಂದು ಸಮಜಾಯಿಷಿ ನೀಡಿದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next