Advertisement

ಕಾಂಗ್ರೆಸ್ ಸದಸ್ಯರ ಅಮಾನತು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ: ಡಿಕೆಶಿ

07:44 PM Dec 15, 2021 | Team Udayavani |

ಬೆಂಗಳೂರು: ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರನ್ನು ಅಮಾನತು ಮಾಡಿರುವುದು ಬಹಳ ಕೆಟ್ಟ ಪದ್ಧತಿ.  ಪಾರ್ಲಿಮೆಂಟ್ ನಲ್ಲಿ ಮಾಡಿದ್ದಾರೆ ಅಂತ ಇಲ್ಲಿಯೂ ಮಾಡಿದ್ದಾರೆ. ನಮ್ಮ ಪಕ್ಷ ಇದನ್ನು ಖಂಡಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

Advertisement

ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರ ಅಮಾನತು ಮಾಡಿರುವುದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಮಾರಕ. ನಾಳೆ 10 ಗಂಟೆಗೆ ಸಭೆ ನಡೆಸಿ ಇದರ ಬಗ್ಗೆ ಚರ್ಚೆ ನಡೆಸಿ, ಮುಂದೆ ಏನು ಕ್ರಮಕೈಕೊಳ್ಳಬೇಕು ಎನ್ನುವ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದರು.

ಸದನದಲ್ಲಿ ಆರೋಪ ಬಂದ ಸದಸ್ಯರ ಮೇಲೆ ಹಿಂದೆ ಚರ್ಚೆ ಮಾಡಿಲ್ವಾ? ಕಾನೂನು ಪ್ರಕಾರ ನೋಟೀಸ್ ಕೊಡ್ಬೇಕು. ಉತ್ತರ ಹೇಳಿ, ಆರೋಪಿ ಅಂತ ಹೇಳಿದ್ವಾ? ನೈತಿಕವಾದ ವಿಚಾರ ಅಲ್ವಾ ಇದು ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ನವರ ಮೇಲೆ ಕೇಸ್ ಆಯ್ತು  ಜೈಲಿಗೆ ಹೋದರು. ಆ ಕೊಡಲೇ ಅವರು ಆರೋಪಿ ಆದ್ರಾ? ನಾನು ಯಾರ ಬಗ್ಗೆಯೂ ಮಾತನಾಡಲ್ಲ. ಇದರ ಬಗ್ಗೆ ನಮ್ಮ ಪಕ್ಷ ಸರಿಯಾದ ಉತ್ತರ ನೀಡಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next