Advertisement

ಡಿ.ಕೆ ಶಿವಕುಮಾರ್ ಎರಡನೇ ಸಿದ್ದಾರ್ಥ್ ಆಗಬಾರದು: ನಂಜಾವದೂತ ಸ್ವಾಮೀಜಿ

04:16 PM Sep 11, 2019 | Mithun PG |

ಬೆಂಗಳೂರು: ಸಾವಿರಾರು ಜನರಿಗೆ ಉದ್ಯೋಗ, ಲಕ್ಷ ಲಕ್ಷ ಕುಟುಂಬಗಳಿಗೆ ಅನ್ನ ಕೊಟ್ಟ ಸಿದ್ಧಾರ್ಥ್ ರನ್ನ ಕಳೆದುಕೊಂಡಿದ್ದೇವೆ . ಅದೇ ರೀತಿಯಲ್ಲಿ  ಡಿ.ಕೆ ಶಿವಕುಮಾರ್ ಎರಡನೇ ಸಿದ್ದಾರ್ಥ್ ಆಗಬಾರದು ಎಂದು ನಂಜಾವದೂತ ಸ್ವಾಮೀಜಿ ಹೇಳಿದ್ದಾರೆ.

Advertisement

ಡಿಕೆಶಿ ಬಂಧನ ವಿರೋಧಿಸಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನಾ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು ಡಿಕೆಶಿ ಹಲವರ ಬಾಳಿಗೆ ಬೆಳಕಾಗಿದ್ದಾರೆ. ಅವರ ಧ್ವನಿಯನ್ನು ಮೊಟಕು ಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಬೆಂಗಳೂರಿಗೆ ಕಾವೇರಿ ನೀರು ತಂದಿದ್ದು ದೇವೇಗೌಡರು. ಈ ಬಾರಿ ಅವರನ್ನು ಸಂಸದರಾಗಿ ಕಳುಹಿಸಿಕೊಡಲು ಆಗಲಿಲ್ಲ. ಅದ್ದರಿಂದ ಕೇಂದ್ರದಲ್ಲಿ ಅವರ ಧ್ವನಿ ಕಳಚಿದೆ. ಹೆಚ್ ಡಿ ಕುಮಾರಸ್ವಾಮಿ 48 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದರು. ಅವರ ಧ್ವನಿಯನ್ನು ಕೂಡ ಮೊಟಕು ಮಾಡುವ ಕೆಲಸ ಆಯಿತು ಎಂದು ಅಭಿಪ್ರಾಯಪಟ್ಟರು.

ಒಕ್ಕಲಿಗರು ಯಾರಿಗೂ ಕಿಂಚಿತ್ತೂ ನೋವು ಕೊಡಲ್ಲ ಮತ್ತು ಘಾಸಿ  ಮಾಡಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು .

Advertisement

Udayavani is now on Telegram. Click here to join our channel and stay updated with the latest news.

Next