Advertisement

ಡಿಕೆಶಿ ಮನೆಗೆ ಸಭೆ ಮಾಡಲು ಹೋಗಿಲ್ಲ

06:00 AM Oct 06, 2018 | |

ಕೋಲಾರ: ಸಚಿವ ಡಿ.ಕೆ.ಶಿವಕುಮಾರ್‌ ಮನೆಗೆ ತಿಂಡಿ ತಿನ್ನುವುದಕ್ಕೆ ಹೋಗಿದ್ದೆವು. ಸಭೆ ಮಾಡುವುದಕ್ಕೆ ಅಲ್ಲ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಕೆ.ಜೆ. ಜಾರ್ಜ್‌ ಪ್ರತಿಕ್ರಿಯಿಸಿದ್ದಾರೆ. 

Advertisement

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್‌ ಮನೆಗೆ ಹೋಗಿದ್ದು ಸಭೆ ಮಾಡುವುದಕ್ಕೆ ಅಲ್ಲ. ಇದರಲ್ಲಿ ಯಾವುದೇ ರಾಜಕೀಯವಿಲ್ಲ ಎಂದರು.

ಬೆಳ್ಳಿ ತಟ್ಟೆಯಲ್ಲಿ ತಿಂಡಿ ನೀಡಿರುವುದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಡಿಕೆಶಿ ನಮ್ಮ ಸಹೋದ್ಯೋಗಿ, ತಿಂಡಿಗೆ ಕರೆದಿದ್ದರು, ಹೋಗಿದ್ದೆವು. ಅವರು ಯಾವ ತಟ್ಟೆಯಲ್ಲಿ ತಿಂಡಿ ಇಟ್ಟರು ಎಂಬುದು ಗೊತ್ತಿಲ್ಲ ಎಂದರು.

ಸಿದ್ದರಾಮಯ್ಯ ಅನುಪಸ್ಥಿತಿ ಕುರಿತು ಮಾತನಾಡಿ,ಸಿದ್ದರಾಮಯ್ಯ ಕರೆದಾಗಲೂ ನಾವು ಹೋಗಿದ್ದೇವೆ.ಅವರು ಸಮನ್ವಯ ಸಮಿತಿ ಅಧ್ಯಕ್ಷರು. ಮಾಜಿ ಮುಖ್ಯಮಂತ್ರಿಗಳು. ಅವರನ್ನು ಎಲ್ಲದಕ್ಕೂ ಕರೆಯುವುದಕ್ಕೆ ಆಗುವುದಿಲ್ಲ. ಎಲ್ಲದಕ್ಕೂ ಅವರು ಬರುವುದಕ್ಕೂ ಆಗುವುದಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next