Advertisement

Kambala: ತಿರುವೈಲು ಜೋಡುಕರೆ ಕಂಬಳದಲ್ಲಿ ಭಾಗಿಯಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

01:43 PM Feb 17, 2024 | Team Udayavani |

ಮಂಗಳೂರು: ವಾಮಂಜೂರು ತಿರುವೈಲು ಗುತ್ತು ಸಂಕು ಪೂಂಜ- ದೇವು ಪೂಂಜ ಜೋಡುಕರೆ ಕಂಬಳ ಟ್ರಸ್ಟ್ ವತಿಯಿಂದ ಶನಿವಾರ ಆರಂಭಗೊಂಡ ತುಳುನಾಡ ಕಂಬಳ ತಿರುವೈಲೋತ್ಸವದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವ‌ಕುಮಾರ್ ಅವರು ಭಾಗವಹಿಸಿದರು.

Advertisement

ಈ‌ ವೇಳೆ‌ ಮಾತನಾಡಿದ ಅವರು, ತುಳುನಾಡು ಪವಿತ್ರ ಭೂಮಿ, ಇದು ಸರ್ವ ಜನಾಂಗದ‌ ಶಾಂತಿಯ ತೋಟ, ಇಲ್ಲಿನ ಸಂಸ್ಕೃತಿ ಭಾಷೆ ರಾಜ್ಯಕ್ಕೆ ಮಾದರಿ. ಕಂಬಳವನ್ನು ಉಳಿಸಿ ಬೆಳೆಸುತ್ತಿರುವ ಪ್ರತಿಯೊಬರ ಕಾರ್ಯ ಶ್ಲಾಘನೀಯ. ಕಂಬಳಕ್ಕೆ ಸರಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.

ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ತಿರುವೈಲು‌ ಕಂಬಳ ಸಮಿತಿ ಅಧ್ಯಕ್ಷ ನವೀನ್ ಚಂದ್ರ‌ ಆಳ್ವ, ಗೌರವಾಧ್ಯಕ್ಷ ಮಿಥುನ್ ರೈ, ಕಾರ್ಯಾಧ್ಯಕ್ಷ ಪ್ರವೀಣ್ ಚಂದ್ರ‌ ಆಳ್ವ, ಪ್ರಮುಖರಾದ ಇನಾಯತ್ ಅಲಿ, ಪದ್ಮರಾಜ್, ನಿತಿನ್ ಶೆಟ್ಟಿ, ರಾಹುಲ್ ನಾಯಕ್ ಮತ್ತಿತರರಿದ್ದರು. ಕರಾವಳಿ ಶಿಕ್ಷಣ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಗಣೇಶ್ ರಾವ್ ಕಂಬಳ ಕೂಟಕ್ಕೆ ಚಾಲನೆ ನೀಡಿದರು.

ಇದನ್ನೂ ಓದಿ: ದ.ಕನ್ನಡದಲ್ಲಿ ನಾವು ಗೆಲ್ಲುವ ಸಾಧ್ಯತೆ ಹೆಚ್ಚಿದೆ: ಹಾಗಾಗಿ ಈ ಸಮಾವೇಶ; ಡಿಕೆ ಶಿವಕುಮಾರ್

Advertisement

Udayavani is now on Telegram. Click here to join our channel and stay updated with the latest news.

Next