Advertisement

ಕಾಂಗ್ರೆಸ್ ನಲ್ಲಿ ಪದಾಧಿಕಾರಿ ಬೆಂಕಿ;ಪ್ರಮುಖ ನಾಯಕರ ಜತೆ ಚರ್ಚಿಸದೇ ಪಟ್ಟಿ ಒಯ್ದರೇ ಡಿಕೆಶಿ ?

09:54 PM Mar 14, 2022 | Team Udayavani |

ಬೆಂಗಳೂರು : ಪದಾಧಿಕಾರಿಗಳ‌ ಪಟ್ಟಿ ವಿಚಾರ ಕಾಂಗ್ರೆಸ್ ನಲ್ಲಿ ಭಾರಿ ಶೀತಲ ಸಮರ ಸೃಷ್ಟಿಸಿದ್ದು, ಹಿರಿಯರ ಜತೆ ಚರ್ಚೆ ನಡೆಸದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಭಾವ್ಯರ ಪಟ್ಟಿಯನ್ನು ದಿಲ್ಲಿಗೆ ಒಯ್ದಿರುವ ಬಗ್ಗೆ ಅಸಮಾಧಾನ ವ್ಯಕ್ತವಾಗುತ್ತಿದೆ.

Advertisement

2017ರಲ್ಲಿ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆಯಾದ ಬಳಿಕ ಇದುವರೆಗೆ ಹೊಸ ನೇಮಕವಾಗಿಲ್ಲ. ತಮ್ಮ ತಮ್ಮ ಬೆಂಬಲಿಗರ ನೇಮಕಕ್ಕೆ ಎಲ್ಲ ನಾಯಕರೂ ಲಾಬಿ ನಡೆಸುತ್ತಿದ್ದಾರೆ.

ಪಟ್ಟಿ ಅಂತಿಮಗೊಳಿಸುವ ವಿಚಾರದಲ್ಲಿ  ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಧ್ಯೆ ಭಿನ್ನಾಭಿಪ್ರಾಯವಿದೆ. ಪಟ್ಟಿ ಅಂತಿಮಗೊಳಿಸುವುದಕ್ಕೆ ಮುನ್ನ ಶಿವಕುಮಾರ್ ತಮ್ಮ ಜತೆ ಚರ್ಚೆ ನಡೆಸಲಿ ಎಂಬ ನಿರೀಕ್ಷೆ ಯನ್ನು ಸಿದ್ದರಾಮಯ್ಯ ಹೊಂದಿದ್ದಾರೆ. ಆದರೆ ಈ ವಿಚಾರದ ಬಗ್ಗೆ ಚರ್ಚೆ ನಡೆಸುವುದಕ್ಕೆ ಶಿವಕುಮಾರ್ ಸಿದ್ದರಿಲ್ಲ.

ತಮ್ಮದೇ ಆದ ಪಟ್ಟಿಯನ್ನು ಶಿವಕುಮಾರ್ ರಚಿಸಿದ್ದಾರೆ. ಆ ಪಟ್ಟಿಯ ಜತೆಗೆ ಅವರು ದಿಲ್ಲಿಗೆ ತೆರಳಿದ್ದಾರೆ ಎಂಬ ಗುಮಾನಿ ಕಾಂಗ್ರೆಸ್ ರಾಜ್ಯ ನಾಯಕರಲ್ಲಿ ಮೂಡಿದೆ. ಒಂದೊಮ್ಮೆ ಈ ಪಟ್ಟಿಗೆ ಹೈಕಮಾಂಡ್ ಒಪ್ಪಿಗೆ ನೀಡಿದರೆ ಕಾಂಗ್ರೆಸ್ ಪಾಳಯದಲ್ಲಿ ಅಸಮಾಧಾನ ಭುಗಿಲೇಳಲಿದೆ ಎಂದು ಹೇಳಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next