Advertisement

ಮತ್ತೆ ಬಂದಿದೆ ರೇಷ್ಮೆ ಜತೆ ದೀಪಾವಳಿ

07:30 AM Oct 23, 2019 | mahesh |

ಮಣಿಪಾಲ: ದೀಪಾವಳಿ ಹಬ್ಬದ ಮೆರುಗು ಹೆಚ್ಚಿಸಲೆಂದೇ ಎರಡು ವರ್ಷಗಳ ಹಿಂದೆ ಆರಂಭವಾದ “ಉದಯವಾಣಿ’ಯ “ರೇಷ್ಮೆ ಜತೆ ದೀಪಾವಳಿ’ ಸ್ಪರ್ಧೆಯ ಮೂರನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ.

Advertisement

ಎರಡು ವರ್ಷಗಳಿಂದ ಈಗಾಗಲೇ ಜನಪ್ರಿಯವಾಗಿರುವ ರೇಷ್ಮೆ ಜತೆ ದೀಪಾವಳಿ ಸ್ಪರ್ಧೆಯಲ್ಲಿ ವಿಶೇಷವೆಂದರೆ ಎರಡು ಶ್ರೀಮಂತಿಕೆಗಳ ಕೂಡುವಿಕೆ. ರೇಷ್ಮೆ ಎಂಬ ಸಾಂಪ್ರದಾಯಿಕತೆಯ ಜತೆಗೆ ಹಬ್ಬವೆಂಬ ಸಂಪ್ರದಾಯದ ಶ್ರೀಮಂತಿಕೆಯನ್ನು ಸೇರಿಸಿ ಈ ಸ್ಪರ್ಧೆಯನ್ನು ರೂಪಿಸಲಾಗಿದೆ. ಅದರೊಂದಿಗೆ ರೇಷ್ಮೆಗೆ ಸಂಭ್ರಮ ಹೆಚ್ಚಿಸುವ ಶಕ್ತಿ ಇದೆ. ಸಾಮಾನ್ಯವಾಗಿ ಸಂಭ್ರಮದ ಕಾರ್ಯಕ್ರಮವೆಂದರೆ ರೇಷ್ಮೆಯೇ ನಮ್ಮ ಮೊದಲ ಆಯ್ಕೆ. ಅದೇ ಕಾರಣಕ್ಕೆಂದೇ ರೇಷ್ಮೆಯನ್ನು ಅತ್ಯಂತ ಸಡಗರದಿಂದ ಆಚರಿಸುವ ದೀಪಾವಳಿಯೊಂದಿಗೆ ಸೇರಿಸಲಾಗಿದೆ. ಈ ವರ್ಷವೂ ಅತ್ಯಾಕರ್ಷಕ ಬಹುಮಾನಗಳನ್ನು ನಿಗದಿಪಡಿಸಲಾಗಿದೆ.

ಮೊದಲೆರಡು ಆವೃತ್ತಿಗಳಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ಓದುಗರು ತಮ್ಮ ಕುಟುಂಬದ, ಗೆಳತಿಯರ ಜತೆಗೆ ರೇಷ್ಮೆ ಉಟ್ಟು ದೀಪಾವಳಿ ಹಬ್ಬ ಆಚರಿಸಿ ಫೋಟೋಗಳನ್ನು ಕಳುಹಿಸಿ ಇಡೀ ಸ್ಪರ್ಧೆಯನ್ನು ಅತ್ಯಂತ ಯಶಸ್ವಿಗೊಳಿಸಿದ್ದರು. ಉದಯವಾಣಿಯ ಈ ವಿಶಿಷ್ಟ ಸ್ಪರ್ಧೆಗೆ ಮಂಗಳೂರಿನ ಸಂಜೀವ ಸಿಲ್ಕ್ಸ್ ಸಂಸ್ಥೆಯು ಸಹಯೋಗ ನೀಡಿತ್ತು.

ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಸಲುವಾಗಿಯೇ ಮೂರನೇ ಆವೃತ್ತಿಯ ಸ್ಪರ್ಧೆಯ ನಿಯಮಗಳು, ಸಂಪರ್ಕ ಸಂಖ್ಯೆ ಎಲ್ಲ ವಿವರಗಳನ್ನೂ ಶೀಘ್ರವೇ ಪ್ರಕಟಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next