Advertisement

ದೀಪಾವಳಿ, ಕರ್ನಾಟಕ ರಾಜ್ಯೋತ್ಸವ: ನಾದಗಾನ ಸಂಗೀತ ಕಛೇರಿ

01:06 PM Nov 28, 2020 | Adarsha |

ಸಿಟಿ: ಅಮೆರಿಕಾದ ಸಿಟಿ ಹೊಯ್ಸಳ ಕನ್ನಡ ಕೂಟದ ವತಿಯಿಂದ ವರ್ಚುವಲ್‌ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನ. 21ರಂದು ಆಯೋಜಿಸಲಾಯಿತು.

Advertisement

ರಾಷ್ಟ್ರಕವಿ ಕುವೆಂಪು ಅವರು ರಚಿಸಿದ ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಕಾರ್ಯಕ್ರಮದಲ್ಲಿ ವಿದ್ವಾನ್‌ ಮೈಸೂರ್‌ ಹರೀಶ್‌ ಪಾಂಡವ್‌ ತಂಡದಿಂದ ನಾದಗಾನ ಸ್ಯಾಕ್ಸೋಫೋನ್‌ ಸಂಗೀತ ಕಛೇರಿ ನಡೆಯಿತು. ತಂಡದಲ್ಲಿ ಜಯಚಂದ್ರ ತುಮಕೂರು, ಪುರುಷೋತ್ತಮ ಮೈಸೂರು, ಅಭಿಷೇಕ್‌ ಬೆಂಗಳೂರು ಪಾಲ್ಗೊಂಡಿದ್ದರು.

ಇದನ್ನೂ ಓದಿ:ಅಮೆರಿಕಾದ ಹಲವೆಡೆ ಕರ್ನಾಟಕ ರಾಜ್ಯೋತ್ಸವ ಸಂಭ್ರಮ

ಪೂರ್ಣಿಮಾ ಶೇಷಗಿರಿ ರಾವ್‌ ಕಾರ್ಯಕ್ರಮ ನಿರೂಪಿಸಿದರು.  ಕೋವಿಡ್‌ ಸಂದರ್ಭದಲ್ಲಿ  ಕನ್ನಡ ಬಳಗಕ್ಕೆ ಸಹಾಯ ನೀಡಿದವರಿಗೆ ಈ ಸಂದರ್ಭದಲ್ಲಿ  ಶಾಶ್ವತಿ ಸಂತೋಷ್‌ ಧನ್ಯವಾದ ಸಲ್ಲಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next