Advertisement

Goa: ದೀಪಾವಳಿ ರಜೆ ಮಜಾ- ಗೋವಾದ ವಿವಿಧ ಬೀಚ್‌ಗಳಲ್ಲಿ ನೀರುಪಾಲಾಗುತ್ತಿದ್ದ 17 ಜನರ ರಕ್ಷಣೆ

04:47 PM Nov 16, 2023 | Pranav MS |

ಪಣಜಿ: ದೀಪಾವಳಿ ರಜೆಯ ವಾರಾಂತ್ಯದಲ್ಲಿ ಗೋವಾದ ವಿವಿಧ ಬೀಚ್‍ಗಳಲ್ಲಿ ನಡೆದ ಪ್ರತ್ಯೇಕ ಹತ್ತು ಘಟನೆಗಳಲ್ಲಿ ಮುಳುಗುತ್ತಿದ್ದ 17 ಜನರನ್ನು ದೃಷ್ಠಿ ಜೀವರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದರು. ಇವರಲ್ಲಿ ಕಝಾಕಿಸ್ತಾನ್‍ನಿಂದ ಬಂದಿದ್ದ ಇಬ್ಬರು ಪ್ರವಾಸಿಗರನ್ನೂ ರಕ್ಷಿಸಲಾಗಿದೆ ಎಂದು ದೃಷ್ಟಿ ಜೀವರಕ್ಷಕ ರಕ್ಷಣಾ ಸಂಸ್ಥೆ ಮಾಹಿತಿ ನೀಡಿದೆ.

Advertisement

ಉತ್ತರ ಗೋವಾದ ಹರ್ಮಲ್ ಬೀಚ್‍ನಲ್ಲಿ ಬಲವಾದ ಪ್ರವಾಹಕ್ಕೆ ಸಿಲುಕಿದ್ದ ಕಜಕಿಸ್ತಾನದ ಇಬ್ಬರು ವಿದೇಶಿ ಪ್ರಜೆಗಳು ನೀರಿನಲ್ಲಿ ಮುಳುಗಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದರು. ಆದರೆ ದೃಷ್ಠಿ ಸಂಸ್ಥೆಯ ಸ್ವಯಂಸೇವಕರು ತಕ್ಷಣ ಅವರ ಬಳಿಗೆ ಧಾವಿಸಿ ಅವರನ್ನು ಸುರಕ್ಷಿತವಾಗಿ ರಕ್ಷಿಸಿದರು. ಹರ್ಮಾಲ್ ಬೀಚ್‍ನಲ್ಲಿ ಮುಳುಗುತ್ತಿದ್ದ ದೆಹಲಿ ಮತ್ತು ಬೆಂಗಳೂರಿನ ಇಬ್ಬರು ಪ್ರವಾಸಿಗರನ್ನು ಸಹ ರಕ್ಷಿಸಲಾಗಿದೆ.

ಶುಕ್ರವಾರ ಮತ್ತು ಭಾನುವಾರದ ನಡುವೆ ಗೋವಾದ ಕಲಂಗುಟ್‍ನ ಕಡಲತೀರದಲ್ಲಿ ಉತ್ತರ ಪ್ರದೇಶದ ಮೂವರು ಹುಡುಗಿಯರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ದೃಷ್ಟಿ ಮರೈನ್ ಲೈಫ್‍ಸೇವರ್ಸ್‍ನ ವಕ್ತಾರರು ತಿಳಿಸಿದ್ದಾರೆ. ಅಂತಹ ಇತರ ಘಟನೆಗಳಲ್ಲಿ ಇತರ ಇಬ್ಬರನ್ನು ಸಮುದ್ರತೀರದಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ. ದೃಷ್ಠಿ ಜೀವರಕ್ಷಕ ದಳದ ಸಿಬ್ಬಂದಿಗಳು ಗೋವಾದ ಮಾಂಡ್ರೆ, ಆಗೋಂಡಾ, ಕೆಲ್ಶಿ, ಮೊರ್ಜಿ ಮತ್ತು ಸಿಕೇರಿ ಬೀಚ್‍ಗಳಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿವೆ ಎಂದು ವಕ್ತಾರರು ತಿಳಿಸಿದ್ದಾರೆ. ರಕ್ಷಣಾ ತಂಡವು ತಮ್ಮ ಕಾರ್ಯಾಚರಣೆಯ ಸಮಯದಲ್ಲಿ ಇಬ್ಬರು ಹುಡುಗಿಯರನ್ನು, ಐದು ವರ್ಷ ಮತ್ತು ಒಂಬತ್ತು ವರ್ಷದ ಮಗುವನ್ನು ರಕ್ಷಿಸಿ ಅವರ ಪೋಷಕರಿಗೆ ಹಸ್ತಾಂತರಿಸಿದರು.

ಇದನ್ನೂ ಓದಿ: Fentanyl ಇಂಜೆಕ್ಷನ್‌ ನಿಂದ 70 ಸಾವಿರ ಜನರ ಸಾವು; ನಿಷೇಧಕ್ಕೆ ಚೀನಾ ಒಪ್ಪಂದ…ಏನಿದು?

Advertisement

Udayavani is now on Telegram. Click here to join our channel and stay updated with the latest news.

Next