Advertisement

ಮಂತ್ರಾಲಯದಲ್ಲಿ ದೀಪಾವಳಿ ಸಂಭ್ರಮ

03:42 PM Oct 20, 2017 | |

ರಾಯಚೂರು: ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ನರಕ ಚತುರ್ದಶಿ ಹಾಗೂ ದೀಪಾವಳಿ ನಿಮಿತ್ತ ವಿಶೇಷ ಕಾರ್ಯಕ್ರಮಗಳು ನೆರವೇರಿದವು.

Advertisement

ಶ್ರೀಮಠದ ಪೀಠಾ ಧಿಪತಿ ಶ್ರೀ ಸುಬುಧೇಂದ್ರತೀರ್ಥರು ಪ್ರಾತಃಕಾಲದಲ್ಲಿ ತುಳಸಿ ಪೂಜೆ, ಗೋ ಪೂಜೆ ಹಾಗೂ ಶ್ರೀ ಗುರು ರಾಯರ ಮೂಲ ಬೃಂದಾವನಕ್ಕೆ ತೈಲ ಅಭ್ಯಂಜನ ಮತ್ತು ನಾರೀಕೃತ ನೀರಾಜನ ನೆರವೇರಿಸಿದರು. ಅನಂತರ ಶ್ರೀಮಠದ ಆವರಣದಲ್ಲಿ ಸುಮಂಗಲಿಯರಿಂದ ಪೀಠಾ ಧಿಪತಿಗಳಾದ ಸುಬುಧೇಂದ್ರತೀರ್ಥರಿಗೆ ಅಭ್ಯಂಜನ ಹಾಗೂ ನಾರೀಕೃತ ನೀರಾಜನ ಕಾರ್ಯ ಕ್ರಮ ನೆರವೇರಿತು. 

ಶ್ರೀಮಠದಲ್ಲಿ ವಿಶೇಷ ಪೂಜೆಗಳು ನಡೆದ ಪ್ರಯುಕ್ತ ಭಕ್ತಸಾಗರವೇ ಹರಿದು ಬಂದಿತ್ತು. ಸಂಜೆ ಕಾರ್ತೀಕ ದೀಪೋತ್ಸವ ಕಾರ್ಯಕ್ರಮ ಜರಗಿತು. ಈ ನಿಮಿತ್ತ ಶ್ರೀಗಳು ವಿಶೇಷ ಪೂಜೆ ನೆರವೇರಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next