Advertisement

ಬಗೆದಷ್ಟು ಆಳಕ್ಕೆ ಹೋಗುತ್ತಿದೆ ದಿವ್ಯಾ ಹಾಗರಗಿ ‘ಕಾಂಗ್ರೆಸ್’ ನಂಟು!

11:07 AM May 01, 2022 | Team Udayavani |

ಬೆಂಗಳೂರು: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಬಲೆಗೆ ಬಿದ್ದಿರುವ ದಿವ್ಯಾ ಹಾಗರಗಿಯ ‘ಕಾಂಗ್ರೆಸ್’ ನಂಟು ಬಗೆದಷ್ಟು ಆಳಕ್ಕೆ ಹೋಗುತ್ತಿದೆ. ರಾಜಕೀಯ ಹೇಳಿಕೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದೆ.

Advertisement

ಪುಣೆಯಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್ ನಾಯಕ ಸುರೇಶ ಕಾಟೇಗಾಂವ ಅವರನ್ನು ಬಂಧಿಸಲಾಗಿದೆ. ಸುರೇಶ ಕಾಟೇಗಾಂವ ಅವರ ಸಹೋದರಿ ಸುರೇಖಾ ಸ್ಥಳೀಯ ಕಾಂಗ್ರೆಸ್ ನಾಯಕಿಯಾಗಿದ್ದಾರೆ. ಮಹಾರಾಷ್ಟ್ರದ ಅಕ್ಕಲಕೋಟ ತಾಲೂಕು ಪಂಚಾಯತ ಮಾಜಿ ಅಧ್ಯಕ್ಷೆಯಾಗಿರುವ ಸುರೇಖಾ ಈಗ ಸದಸ್ಯೆಯಾಗಿದ್ದಾರೆ. ಸುರೇಶ್ ಗೆ ಅಫಜಲಪುರದಲ್ಲಿ ಮರಳು ಬ್ಲಾಕ್ ಟೆಂಡರ್ ಪಡೆಯಲು ದಿವ್ಯಾ ಹಾಗರಗಿ ಸಹಾಯ ಮಾಡಿದ್ದರು ಎಂಬ ಆರೋಪವಿದೆ.

ಪಿಎಸ್ಐ ಅಕ್ರಮ ಬಯಲಾಗುತ್ತಿದ್ದಂತೆಯೇ ದಿವ್ಯಾ ಏಪ್ರಿಲ್ 13 ರಂದು ಕಲಬುರಗಿಯಿಂದ ಗುಜರಾತ್ ಕಾಳಿಕಾ ಮಂದಿರಕ್ಕೆ ಖಾಸಗಿ ವಾಹನದಲ್ಲಿ ಹೋದರು. ಅಲ್ಲಿ 3-4 ದಿನ ತಂಗಿದ್ದರು. ನಂತರ ಅಲ್ಲಿಂದ ಗುಜರಾತ್ ನ ಅಂಬಾಜಿ ಮಂದಿರಕ್ಕೆ ತೆರಳಿ 3-4 ದಿನವಿದ್ದರು.

ಇದನ್ನೂ ಓದಿ:ಪತಿ ಕೊಂದು ಸತ್ತಂತೆ ನಟಿಸಿ, ಕಥೆ ಕಟ್ಟಿದ ಪತ್ನಿ: ಕೊಲೆಗೆ ಐಡಿಯಾ ಕೊಟ್ಟಿದ್ದ ಪ್ರಿಯತಮ

ಅಲ್ಲಿಂದ ಪುಣೆಗೆ ಬಂದು ಸುರೇಶ ಕಂಪನಿಯ ಉದ್ಯೋಗಿ ಕಾಳಿದಾಸಗೆ ಸೇರಿದ್ದ ಅಪಾರ್ಟ್ಮೆಂಟ್ ನಲ್ಲಿ ಐದು ದಿನ ವಾಸವಿದ್ದರು. ನಂತರ ದಿವ್ಯಾ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next