Advertisement

ಪಿಎಸ್ಐ ನೇಮಕಾತಿ ಅಕ್ರಮ : ದಿವ್ಯಾ ಹಾಗರಗಿ ಸೇರಿ ಆರು ಜನರಿಗೆ ಬಂಧನ ವಾರೆಂಟ್ ಜಾರಿ

10:19 PM Apr 26, 2022 | Team Udayavani |

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ತಲೆಮರೆಸಿಕೊಂಡಿರುವ ಮಾಸ್ಟರ್ ಮೈಂಡ್ ಆಗಿರುವ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಸೇರಿ ಆರು ಜನರಿಗೆ ಅರೆಸ್ಟ್ ವಾರಂಟ್ ಜಾರಿಗೊಂಡಿದೆ. ಇದರಿಂದ ಅವರಿಗೆ ಹೊಸ ಕಂಟಕ ಎದುರಾದಂತಾಗಿದೆ.

Advertisement

ದೇಶದ ಗಮನ ಸೆಳೆದಿದ್ದ ಮುಂಬೈ ಸ್ಫೋಟ ಪ್ರಕರಣದಲ್ಲಿ ದಾವೂದ್ ಇಬ್ರಾಹಿಂಗೆ ಜಾರಿಗೊಳಿಸಿದ ಮಾದರಿಯಲ್ಲಿಯೇ ತಲೆ ಕರೆಸಿಕೊಂಡು ಓಡಾಡುವ ಮೂಲಕ ತನಿಖೆಗೆ ಅಸಹಕಾರ ತೋರುತ್ತಿರುವ ಆರು ಜನ ಆರೋಪಿತರಿಗೆ ನ್ಯಾಯಾಲಯ ಬಂಧನ ವಾರೆಂಟ್ ಜಾರಿ ಮಾಡಿದೆ.

ರಾಜ್ಯದಲ್ಲಿ ಜರಗಿದ ಕ್ರಿಮಿನಲ್ ಕೇಸ್ ಗಳಲ್ಲಿ ಈ ತೆರನಾದ ಅರೆಸ್ಟ್ ವಾರೆಂಟ್ ಜಾರಿ ಮಾಡುವುದು ತೀರಾ ವಿರಳ.‌
ಅದರಲ್ಲೂ ತನಿಖಾ ಹಂತದಲ್ಲಿ ವಾರೆಂಟ್​ ಜಾರಿಯಾದರೆ ಆರೋಪಿತರು ಎಲ್ಲಿದ್ದರೂ ಬಂದು ಸಿಐಡಿಗೆ ಇಲ್ಲವೇ ನ್ಯಾಯಾಲಯದ ಹಾಜರಾಗಲೇಬೇಕಾಗುತ್ತದೆ. ಇಲ್ಲದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅವಕಾಶವಿದೆ.‌

ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದ ಮಾಸ್ಟರ್ ಮೈಂಡ್ ದಿವ್ಯಾ ಹಾಗರಗಿ, ಮಂಜುನಾಥ್ ಮೇಳಕುಂದಿ, ರವೀಂದ್ರ ಮೇಳಕುಂದಿ, ಅರ್ಚನಾ, ಕಾಶಿನಾಥ್, ಶಾಂತಿಬಾಯಿಗೆ ಕಲಬುರಗಿಯ 3ನೇ ಜೆಎಂಎಫ್​ಸಿ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.

ಇದನ್ನೂ ಓದಿ : ಕರುಣಾನಿಧಿ ಬರ್ತ್‌ಡೇ ಇನ್ನು ಸರ್ಕಾರಿ ಕಾರ್ಯಕ್ರಮ: ಎಂ.ಕೆ.ಸ್ಟಾಲಿನ್‌

Advertisement

ಮುಂಬೈ ಸ್ಫೋಟ ಪ್ರಕರಣ ಉಲ್ಲೇಖಿಸಿ ಸಿಐಡಿ ಪೊಲೀಸರು ನ್ಯಾಯಾಲಯಕ್ಕೆ‌ ಮೊರೆ ಹೋಗಿದ್ದರು. ಅದನ್ನು ಮನ್ನಿಸಿ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.

ವಾರದೊಳಗಡೆ ಆರೋಪಿತರು ಶರಣಾಗದಿದ್ದರೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಕಳೆದ 15 ದಿನಗಳಿಂದ ದಿವ್ಯಾ ಸೇರಿ ಆರು ಜನ ಆರೋಪಿಗಳು ಸಿಐಡಿಯಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ.

ಸಿಐಡಿಯಿಂದ 6 ವಿಶೇಷ ತಂಡ ರಚನೆ: ದಿವ್ಯಾ ಹಾಗರಗಿ ಮತ್ತಿತರರ ಬಂಧನಕ್ಕೆ ಸಿಐಡಿ ತೀವ್ರ ಶೋಧ ಕಾರ್ಯಾರಂಭಿಸಿದೆ. ಡಿಜಿಪಿ ಪಿ.ಎಸ್. ಸಂಧು ಸೂಚನೆಯಂತೆ ಬಂಧನಕ್ಕೆ ಆರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.

ಸಿಐಡಿಯ ಆರು ತಂಡಗಳು ಕೆಲಸ ಮಾಡುತ್ತಿವೆ. ಶೋಧ ನಡೆಸುತ್ತಿದ್ದರೂ ಇದುವರೆಗೂ ದಿವ್ಯಾ ಎಲ್ಲಿ ಇದ್ದಾರೆ ಸುಳಿವು ಇದುವರೆಗೂ ಪತ್ತೆ ಆಗಿಲ್ಲ. ಇದು ಸಿಐಡಿಗೆ ತಲೆ ನೋವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next