Advertisement

Uttar Pradesh: ವಿಚ್ಚೇದನದ ಬಳಿಕ ಹೃದಯಾಘಾತವಾದ ಪತಿಯನ್ನು ಮತ್ತೆ ವರಿಸಿದ ಪತ್ನಿ.!

11:00 AM Dec 02, 2023 | Team Udayavani |

ಲಕ್ನೋ: ವಿಚ್ಛೇದನ ಪಡೆದು ದೂರವಾದ ಬಳಿಕ ದಂಪತಿಗಳು ಮತ್ತೆ ಒಂದಾಗಿ ಮದುವೆಯಾಗಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ ನಲ್ಲಿ ನಡೆದಿದೆ.

Advertisement

2012 ರಲ್ಲಿ ವಿನಯ್ ಜೈಸ್ವಾಲ್ ಮತ್ತು ಪೂಜಾ ಚೌಧರಿ ಅವರ ವಿವಾಹ ನೆರವೇರಿತ್ತು. ಆರಂಭದಲ್ಲಿ ಪರಸ್ಪರ ಪ್ರೀತಿ ವಿಶ್ವಾಸದಿಂದ ಇದ್ದ ದಂಪತಿಗಳಲ್ಲಿ ಆ ಬಳಿಕ ಮನಸ್ತಾಪಗಳು ಉಂಟಾಗಿದೆ. ಈ ಕಾರಣದಿಂದ ಇಬ್ಬರು ದೂರವಾಗಲು ನಿರ್ಧರಿಸಿದ್ದಾರೆ.

ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಕೋರ್ಟ್‌ ಅಲೆದಾಟ ಶುರುವಾಗಿದೆ. ಇವರ ವಿಚ್ಛೇದನ ಪ್ರಕರಣ ಗಾಜಿಯಾಬಾದ್‌ನ ಕೌಟುಂಬಿಕ ನ್ಯಾಯಾಲಯ, ಉಚ್ಚ ನ್ಯಾಯಾಲಯ ಮತ್ತು ಸುಪ್ರೀಂ ಕೋರ್ಟ್ ನಲ್ಲಿ ವಾದ – ಪ್ರತಿವಾದದ ಬಳಿಕ 2018 ರಲ್ಲಿ ಬೇರ್ಪಟ್ಟರು.

ಇದನ್ನೂ ಓದಿ: Salaar: 15 ವರ್ಷಗಳ ಹಿಂದೆಯೇ ʼಸಲಾರ್‌ʼ ಸಿನಿಮಾ ಮಾಡುವ ಯೋಚನೆ ಬಂದಿತ್ತು; ಪ್ರಶಾಂತ್‌ ನೀಲ್

ಇದಾದ ಬಳಿಕ ಇಬ್ಬರು ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇದೇ ವರ್ಷದ ಆಗಸ್ಟ್‌ ನಲ್ಲಿ ಮಾಜಿ ಪತಿ ವಿನಯ್‌ ಅವರಿಗೆ ಹೃದಯಾಘಾತವಾಗಿದೆ. ಇದರಿಂದ ವಿನಯ್‌ ಓಪನ್‌ ಸರ್ಜರಿಗೆ ಒಳಗಾಗಬೇಕಾಗುತ್ತದೆ. ಈ ಸುದ್ದಿ ಕೇಳಿ ಪೂಜಾ ಅವರಿಗೆ ಆತಂಕವಾಗಿದೆ. ಆಸ್ಪತ್ರೆಗೆ ತೆರಳಿ ಮಾಜಿ ಪತಿಯ ಜೊತೆ ಒಂದಷ್ಟು ಸಮಯವನ್ನು ಪೂಜಾ ಕಳೆದಿದ್ದಾರೆ.

Advertisement

ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಂತೆ, ಅವರ ನಡುವಿನ ಪ್ರೀತಿ ಮತ್ತೆ ಚಿಗುರಿದೆ. ತಮ್ಮ ನಡುವಿನ ಮನಸ್ತಾಪಗಳನ್ನು ಮರೆತು ಮತ್ತೆ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದಾರೆ.

ನವೆಂಬರ್ 23 ರಂದು ವಿನಯ್ ಮತ್ತು ಪೂಜಾ ಪರಸ್ಪರರ ಕುಟುಂಬದ ಸಮ್ಮುಖದಲ್ಲಿ ಮತ್ತೆ ವಿವಾಹವಾಗಿದ್ದಾರೆ. ಗಾಜಿಯಾಬಾದ್‌ನ ಕವಿನಗರದಲ್ಲಿರುವ ಆರ್ಯ ಸಮಾಜ ದೇವಸ್ಥಾನದಲ್ಲಿ ವಿವಾಹ ಸಮಾರಂಭ ನಡೆಯಿತು.

ವಿನಯ್ ಜೈಸ್ವಾಲ್ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (SAIL) ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರೆ, ಮೂಲತಃ ಪಾಟ್ನಾ ನಿವಾಸಿಯಾಗಿರುವ ಪೂಜಾ ಚೌಧರಿ ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next