Advertisement

ಡಿವೈಡರ್‌ ಮೇಲೆ ಸಸಿ ನೆಡುವ ಕಾರ್ಯಕ್ರಮ

11:13 AM Jul 20, 2018 | Team Udayavani |

ಮಹಾನಗರ : ಬೆಂದೂರ್‌ ನಲ್ಲಿರುವ ಸಂತ ತೆರೆಜಾ ಶಾಲೆಯ ಟ್ರಾಫಿಕ್‌ ಟೀಮ್‌ನ ವತಿಯಿಂದ 12 ಸ್ವಮನಸ್ಸಿನ ಪೋಷಕರಿಂದ ಶಾಲೆ ಮುಂಭಾಗದಲ್ಲಿರುವ ಡಿವೈಡರ್‌ನ ಮೇಲೆ ಆಲಂಕೃತ ಗಿಡಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಶಾಲೆಯ ಎಲ್ಲ ಮಕ್ಕಳನ್ನು ಸುರಕ್ಷಿತವಾಗಿ ರಸ್ತೆ ದಾಟಿಸುವ ಹಾಗೂ ಅಲ್ಲಿನ ಟ್ರಾಫಿಕ್‌ ನಿಯಂತ್ರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ‘ಮಕ್ಕಳ ಸುರಕ್ಷೆ ನನ್ನ ಆದ್ಯ ಕರ್ತವ್ಯ’ ಎಂಬ ಧ್ಯೇಯ ವಾಕ್ಯದೊಂದಿಗೆ ತಮ್ಮ ಕಾರ್ಯವನ್ನು ವರ್ಷದ ಎಲ್ಲ ದಿನಗಳಲ್ಲಿ ನೆರವೇರಿಸುತ್ತಾ ಬರುತ್ತಿದ್ದಾರೆ ಎಂದು ಟ್ರಾಫಿಕ್‌ ವಾರ್ಡನ್‌ ಸುಜೀತ್‌ ಜೇಮ್ಸ್‌ ನೊರೊನ್ಹಾ ತಿಳಿಸಿದರು.

Advertisement

ಮನೋಹರ್‌ ಡಿಸಿಲ್ವಾ, ಯಶವಂತ ರಾವ್‌, ಜಾಸನ್‌ ಡಿ’ಸೋಜಾ, ಶಾಂತಿ ಡಿ’ಸೋಜಾ, ರೋಶನಿ ತಾವ್ರೊ, ಡೈನಾ ಪಿಂಟೋ, ಅಂಜನಾ ಕಾಮತ್‌, ಸ್ನೇಹಲ್‌ ಪ್ರಭು, ಪ್ರವೀಣ್‌ ಕೆ., ಡಾಲ್ಸಿ ಡಿ’ಸೋಜಾ, ಓಸ್ವಾಲ್ಡ್‌ ಡಿ’ಸೋಜಾ ಮತ್ತು ಜೋಶ್ಮಿ ಡಿ’ಸೋಜಾ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next