Advertisement

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ : ದೋಷಪೂರಿತ ಟೈಲ್ಸ್‌ ಪೂರೈಸಿದ ಕಂಪೆನಿಗಳಿಗೆ ದಂಡ

12:29 AM Jul 18, 2023 | Team Udayavani |

ಉಡುಪಿ: ದೋಷಪೂರಿತ ಟೈಲ್ಸ್‌ ಪೂರೈಕೆ ಮಾಡಲಾಗಿದೆ ಎನ್ನುವ ಕಾರಣಕ್ಕೆ ಗಣೇಶ್‌ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿಗೆ ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

Advertisement

ಸ್ಟೇಟ್‌ ಬ್ಯಾಂಕ್‌ ಉದ್ಯೋಗಿ ಪ್ರಕಾಶ್‌ ಅವರು ತಮ್ಮ ಹಳೇ ಮನೆಯ ನವೀಕರಣಕ್ಕಾಗಿ ಉಡುಪಿಯ ನಿಟ್ಟೂರು ಬಳಿಯಿರುವ ಗಣೇಶ್‌ ಮಾರ್ಬಲ್ಸ್ ನಿಂದ ಕಜಾರಿಯ ಕಂಪೆನಿಯ ಸುಮಾರು 81,158 ರೂ. ಬೆಲೆಬಾಳುವ ಟೈಲ್ಸ್‌ಗಳನ್ನು ಖರೀದಿಸಿದ್ದರು. ಹೀಗೆ ಖರೀದಿ ಮಾಡಿದ ಟೈಲ್ಸ್‌ಗಳ ಪೈಕಿ ಹಾಲ್‌ ಹಾಗೂ ಬೆಡ್‌ ರೂಂಗೆ ಅಳವಡಿಸಿದ ಟೈಲ್ಸ್‌ಗಳ ಎಲ್ಲ ಅಂಚುಗಳು ಮೇಲಕ್ಕೆ ಉಬ್ಬಿಕೊಂಡು ದೋಷಪೂರಿತವಾಗಿದ್ದವು. ಈ ಬಗ್ಗೆ ಪ್ರಕಾಶ್‌ ಅವರು ಗಣೇಶ್‌ ಮಾರ್ಬಲ್ಸ್ ಅನ್ನು ಸಂಪರ್ಕಿಸಿ ವಿಚಾರ ತಿಳಿಸಿ ಬೇರೆ ಟೈಲ್ಸ್‌ ನೀಡುವಂತೆ ಕೇಳಿಕೊಂಡಾಗ ಅವರು ಗ್ರಾಹಕನಿಗೆ ಹಾರಿಕೆ ಉತ್ತರ ನೀಡಿದ್ದರು.

ಈ ಬಗ್ಗೆ ಪ್ರಕಾಶ್‌ ಅವರು ಕಜಾರಿಯ ಕಂಪೆನಿಯನ್ನು ಸಂಪರ್ಕಿಸಿದಾಗ ಅವರಿಂದಲೂ ಸೂಕ್ತ ಪ್ರತಿಕ್ರಿಯೆ ಬಾರದ ಕಾರಣ ಗಣೇಶ್‌ ಮಾರ್ಬಲ್ಸ್ ಹಾಗೂ ಕಜಾರಿಯ ಕಂಪೆನಿ ವಿರುದ್ಧ ದೋಷಪೂರಿತ ಟೈಲ್ಸ್‌ ಪೂರೈಕೆ, ನಷ್ಟ ಹಾಗೂ ಮಾನಸಿಕವಾಗಿ ವೇದನೆ ಉಂಟು ಮಾಡಿದ ಬಗ್ಗೆ ಪರಿಹಾರವಾಗಿ 5,60,000 ರೂ. ನೀಡಲು ಸೂಕ್ತ ನಿರ್ದೇಶನ ಕೋರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದಾವೆ ಹೂಡಿದ್ದರು. ವಾದ-ಪ್ರತಿವಾದವನ್ನು ಆಲಿಸಿದ ಜಿÇÉಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಗಣೇಶ್‌ ಮಾರ್ಬಲ್ಸ್ ನವರು ಪೂರೈಕೆ ಮಾಡಿದ ಟೈಲ್ಸ್‌ ದೋಷಪೂರಿತ ಎಂದು ಸಾಬೀತುಪಡಿಸಿ ತಪ್ಪಿತಸ್ಥ ಎರಡೂ ಕಂಪೆನಿಗಳಿಗೆ ಟೈಲ್ಸ್‌ ಖರೀದಿಯ 50,592 ರೂ., ಕೆಲಸದ ವೆಚ್ಚ 15,000 ರೂ., ಮಾನಸಿಕ ಹಿಂಸೆ, ತೊಂದರೆ, ದೈಹಿಕ ಶ್ರಮ ಇತ್ಯಾದಿಗಳಿಗೆ ಪರಿಹಾರವಾಗಿ 25,000 ರೂ., ವ್ಯಾಜ್ಯದ ಖರ್ಚು 20,000 ರೂ.ಗಳನ್ನು ಗ್ರಾಹಕನಿಗೆ 30 ದಿನಗಳ ಒಳಗೆ ಪಾವತಿಸುವಂತೆ ಆದೇಶಿಸಿದೆ. ಗ್ರಾಹಕ ಪ್ರಕಾಶ್‌ ಪರವಾಗಿ ಕುಂದಾಪುರದ ನೀಲ್‌ ಬ್ರಿಯಾನ್‌ ಪಿರೇರಾ ವಾದಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next