Advertisement

ಜಿಲ್ಲಾ ಕಾಂಗ್ರೆಸ್‌ ಮೀನುಗಾರರ ಸಮಿತಿ ಸಭೆ

10:19 AM Jan 19, 2018 | |

ಮಹಾನಗರ: ಜಿಲ್ಲಾ ಕಾಂಗ್ರೆಸ್‌ ಮೀನುಗಾರರ ಸಮಿತಿ ಸಭೆಯು ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಪ್ರಭಾಕರ ಶ್ರೀಯಾನ್‌ ಅವರ ಅಧ್ಯಕ್ಷತೆಯಲ್ಲಿ ಮಂಗಳೂರಿನ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಬುಧವಾರ ನಡೆಯಿತು.

Advertisement

ಜಿಲ್ಲಾ ವ್ಯಾಪ್ತಿಗೆ ಬರುವ ಮಂಗಳೂರು ನಗರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ದಕ್ಷಿಣ ಕಾಂಗ್ರೆಸ್‌ ಸಮಿತಿ, ಸುರತ್ಕಲ್‌ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಮೂಲ್ಕಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳನ್ನು ರಚಿಸಿ ಪಕ್ಷ ಸಂಘಟನೆ ಮಾಡಲು ನಿರ್ಣಯಿಸಲಾಯಿತು.

ಮೀನುಗಾರರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಮೀನುಗಾರರಿಗೆ ತಲುಪಿಸಲು ಪಕ್ಷತ ಮೀನುಗಾರರ ಘಟಕವು ಶ್ರಮಿಸಬೇಕೆಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ರಾಜ್ಯ ಮೀನುಗಾರರ ಘಟಕದ ಉಪಾಧ್ಯಕ್ಷ ಬಶೀರ್‌ ಬೈಕಂಪಾಡಿ, ಶೇಖರ ಸುವರ್ಣ ಬೇಂಗ್ರೆ, ಜಿಲ್ಲಾಧ್ಯಕ್ಷ ದೀಪಕ್‌ ಬೋಳೂರು, ಬ್ಲಾಕ್‌ ಅಧ್ಯಕ್ಷ ಜೆ. ಅಬ್ದುಲ್‌ ಸಲೀಂ, ವಿಶ್ವಾಸ್‌ ಕುಮಾರ್‌ ದಾಸ್‌, ಕವಿತಾ ವಾಸು, ಸರಳ ಕೆ., ಕಮಲಾಕ್ಷ ಸಾಲ್ಯಾನ್‌, ನಾರಾಯಣ್‌ ಕೋಟ್ಯಾನ್‌, ಧನಪಾಲ್‌, ಭುವನ್‌, ಸುಶಾಂತ್‌ ಕರ್ಕೇರ, ಸುನಾಲ್‌ ಮೆಂಡನ್‌, ಪವಿತಾ ಡಿ. ಕರ್ಕೇರ , ಲಕ್ಷತ್‌, ನವೀನ ಕರ್ಕೇರ ಬೆಂಗ್ರೆ, ಹರೀಶ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದರು. 

Advertisement

Udayavani is now on Telegram. Click here to join our channel and stay updated with the latest news.

Next