Advertisement

ಅರ್ಹ ಫಲಾನುಭವಿಗಳಿಗೆ ಕಾರ್ಯಾದೇಶ ಪತ್ರ ವಿತರಣೆ

03:35 PM Jul 07, 2019 | Suhan S |

ಲಕ್ಶ್ಯೇ ಶ್ವರ: ಪಟ್ಟಣದ ಪುರಸಭೆ ಸಭಾ ಭವನದಲ್ಲಿ ಶುಕ್ರವಾರ 2017-18ನೇ ಸಾಲಿನ ದೇವರಾಜ ಅರಸು ವಿಶೇಷ ವರ್ಗ ವಸತಿ ಯೋಜನೆಯಡಿ ಪಟ್ಟಣದ 49 ಫಲಾನುಭವಿಗಳಿಗೆ ಮನೆ ಮಂಜೂರಾತಿ ಕಾರ್ಯಾದೇಶ ಪತ್ರ ಮತ್ತು ಎಸ್‌ಎಫ್‌ಸಿ ಶೇ.5ರ ವಿಕಲಚೇತನರ ಕಲ್ಯಾಣ ನಿಧಿ ಅನುದಾನದಲ್ಲಿ 7 ಮಕ್ಕಳಿಗೆ ಶ್ರವಣ ದೋಷ ಯಂತ್ರವನ್ನು ಶಾಸಕ ರಾಮಣ್ಣ ಲಮಾಣಿ ವಿತರಿಸಿದರು.

Advertisement

ಬಳಿಕ ಮಾತನಾಡಿದ ಶಾಸಕರು, ಪ್ರತಿಯೊಬ್ಬರಿಗೂ ಸೂರು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರಗಳು ವಸತಿ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳಲು ಅನುದಾನ ನೀಡುತ್ತಿವೆ. ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.

ಪುರಸಭೆ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ಎಂ.ಆರ್‌.ಪಾಟೀಲ, ಸದಸ್ಯರಾದ ವಿಜಯ ಕರಡಿ, ಮಹೇಶ ಹೊಗೆಸೊಪ್ಪಿನ, ಮಹೇಶ ಹುಲಬಜಾರ, ಜಯಕ್ಕ ಕಳ್ಳಿ, ಜಯವ್ವ ಅಂದಲಗಿ, ನೀಲಪ್ಪ ಹತ್ತಿ, ವಿರುಪಾಕ್ಷಪ್ಪ ಅಣ್ಣಿಗೇರಿ, ತಿಮ್ಮರಡ್ಡಿ ಮರಡ್ಡಿ, ದುಂಡೇಶ ಕೊಟಗಿ, ಬಸವರಾಜ ಮೆಣಸಿನಕಾಯಿ, ವಿಜಯ ಕುಂಬಾರ, ಪ್ರವೀಣ ಬೋಮಲೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next