Advertisement

ಜಿಲ್ಲಾ ಕಾಂಗ್ರೆಸ್‌ನಿಂದ ನಿರಾಶ್ರಿತರಿಗೆ ಊಟ ವಿತರಣೆ

03:41 PM Apr 11, 2020 | Suhan S |

ಕೋಲಾರ: ಕೋವಿಡ್‌-19 ಹರಡುವಿಕೆ ತಡೆಗಾಗಿ ಸರ್ಕಾರ ಲಾಕ್‌ಡೌನ್‌ ಮಾಡಿರುವುದರಿಂದ ಸಂಕಷ್ಟದಲ್ಲಿರುವ ನಿರಾಶ್ರಿತರಿಗೆ ಊಟ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಸಂಘಸಂಸ್ಥೆಗಳ ಮೇಲಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಕೆ. ಚಂದ್ರಾರೆಡ್ಡಿ ತಿಳಿಸಿದರು.

Advertisement

ನಗರದಲ್ಲಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಹಮ್ಮಿಕೊಂಡಿದ್ದ ಉಚಿತ ಊಟ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಸಾಕಷ್ಟು ಮಂದಿ ಒಪ್ಪತ್ತು ಊಟಕ್ಕಾಗಿ ಅಲೆದಾಡುತ್ತಿದ್ದಾರೆ. ಲಾಕ್‌ಡೌನ್‌ ಮುಗಿಯುವತನಕ ಆಯ್ದ ಜಾಗದಲ್ಲಿ ನಿರಾಶ್ರಿತರಿಗೆ ಊಟ ವಿತರಿಸಲಾಗುವುದು ಎಂದು ಹೇಳಿದರು.

ಕೋಲಾರ ನಗರ ಸೇರಿದಂತೆ ತಾಲೂಕುಗಳಲ್ಲಿನ ನಿರಾಶ್ರಿತರ ತಾಣ ಗಳನ್ನು ಗುರುತಿಸಿ ಊಟದ ಪೊಟ್ಟಣ ವಿತರಿಸಲಾಗುವುದು, ಕಾಟ್ಯ ಕರ್ತರು ಅಂತಹ ಸ್ಥಳಗಳನ್ನು ಗುರುತಿಸಿ ಆಯೋಜಕರಿಗೆ ಪಟ್ಟಿ ನೀಡಬೇಕು ಎಂದು ಸೂಚಿಸಿದರು. ಜಿಪಂ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್‌ ಮಾತನಾಡಿ, ಲಾಕ್‌ಡೌನ್‌ ಸಮಸ್ಯೆ ಯಿಂದ ಜನ ತತ್ತರಿಸಿ ಹೋಗಿದ್ದಾರೆ. ಇಂತಹ ಸಂದರ್ಭದಲ್ಲಿ ಬಡವರಿಗೆ ಸಹಾಯ ಮಾಡುವುದು ಶ್ಲಾಘ ನೀಯ ಎಂದರು.

ಮುಖಂಡರಾದ ಎಲ್‌.ಎ. ಮಂಜುನಾಥ್‌, ಕೆ.ಜಯ ದೇವ್‌, ಕುಮಾರ್‌, ವಿಶ್ವನಾಥ್‌, ರಾಮಯ್ಯ, ಎಸ್‌.ಮಂಜುನಾಥ್‌, ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ಮುರಳಿ ಗೌಡ, ಇಕ್ಬಾಲ್‌ ಅಹಮದ್‌, ಪ್ರಸಾದ್‌ ಬಾಬು ಮತ್ತಿತರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next