Advertisement

ರೈಲ್ವೆ ಸಿಬ್ಬಂದಿಯಿಂದ ಕಿಟ್‌ ವಿತರಣೆ

10:36 AM Jun 25, 2020 | Suhan S |

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗದಿಂದ ಬುಧವಾರ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಹಾಯಕರು (ಕೂಲಿಗಳು), ಆಟೋ ರಿಕ್ಷಾ ಚಾಲಕರು ಹಾಗೂ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿಗೆ ದಿನಸಿ ಕಿಟ್‌ ವಿತರಿಸಲಾಯಿತು.

Advertisement

ವಿಭಾಗದ ಟಿಕೆಟ್‌ ಪರಿಶೀಲನಾ ಸಿಬ್ಬಂದಿ, ವಾಣಿಜ್ಯ ಸಿಬ್ಬಂದಿ ಮತ್ತು ನಿಲ್ದಾಣ ಅಧೀಕ್ಷಕ ಕಚೇರಿಯ ಸಿಬ್ಬಂದಿ ಸ್ವಂತ ಖರ್ಚಿನಿಂದ ಸುಮಾರು 350ಕ್ಕೂ ಹೆಚ್ಚು ಕಿಟ್‌ಗಳನ್ನು ವಿತರಿಸಿದರು. ಒಂದು ಕಿಟ್‌ನಲ್ಲಿ 10 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೇಳೆ, 1 ಪ್ಯಾಕೇಟ್‌ ಮೆಣಸಿನಪುಡಿ, 1 ಪ್ಯಾಕೇಟ್‌ ಚಹಾಪುಡಿ, ಸಾಬೂನು, ಅಡುಗೆ ಎಣ್ಣೆ, ರವಾ ಹಾಗೂ ಬೆಲ್ಲ ಸೇರಿದಂತೆ ಇನ್ನಿತರೆ ವಸ್ತುಗಳು ಇವೆ. ನೈರುತ್ಯ ರೈಲ್ವೆ ವಲಯ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕ ಅನಿಲಪವಿತ್ರನ್‌, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎಸ್‌. ಕೆ.ಝಾ, ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸೈಯದ್‌ ಇಮಿ¤ಯಾಜ್‌ ಅಹಮದ್‌ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next