Advertisement

ಕೆಂಪು ವಲಯದಲ್ಲಿ ಬಿಎಂಸಿ ಕಾರ್ಯಾಚರಣೆ ಜನರಿಗೆ ಇಮ್ಯೂನಿಟಿ ಬೂಸ್ಟರ್‌ ಗುಳಿಗೆ ವಿತರಣೆ

08:18 AM May 15, 2020 | mahesh |

ಮುಂಬಯಿ: ಕೋವಿಡ್‌ -19 ಪ್ರಕರಣಗಳ ಸಂಖ್ಯೆ ಮಹಾರಾಷ್ಟ್ರದಲ್ಲಿ 26,000 ಮತ್ತು ಮುಂಬಯಿಯಲ್ಲಿ 16,000ಕ್ಕೆ ಸಮೀಪಿಸುತ್ತಿರುವುದರೊಂದಿಗೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಕಂಟೈನ್‌ಮೆಂಟ್‌ ಮತ್ತು ಕೆಂಪು ವಲಯಗಳಲ್ಲಿ ವಾಸಿಸುವ ಜನರಿಗೆ ರೋಗನಿರೋಧಕ ಶಕ್ತಿ ವರ್ಧಕ (ಇಮ್ಯೂನಿಟಿ ಬೂಸ್ಟರ್‌) ಮಾತ್ರೆಗಳನ್ನು ವಿತರಿಸಲು ಆರಂಭಿಸಿದೆ.

Advertisement

ಮುಂಬಯಿ ಮೇಯರ್‌ ಕಿಶೋರಿ ಪೆಡ್ನ್ಕರ್‌ ಇದನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ಬಿಎಂಸಿ ಮನೆ-ಮನೆಗೆ ತೆರಳಿ ಜನರ ತಪಾಸಣೆ ಮಾಡಲು ಪ್ರಾರಂಭಿಸಿದೆ ಹಾಗೂ ಕಂಟೈನ್‌ಮೆಂಟ್‌ ಮತ್ತು ಕೆಂಪು ವಲಯಗಳಲ್ಲಿ ವಾಸಿಸುವ ಎಲ್ಲ ಜನರಿಗೆ ಆರ್ಸೆನಿಕಮ್‌ ಆಲ್ಬಮ್‌ 30 ಗುಳಿಗೆಯನ್ನು ನೀಡಲು ಪ್ರಾರಂಭಿಸಿದೆ ಎಂದು ಪೆಡ್ನ್ಕರ್‌  ಹೇಳಿದ್ದಾರೆ. ಈ ಔಷಧದ ಪರಿಣಾಮಕಾರಿತ್ವವು ಇನ್ನೂ ತಿಳಿದುಬಂದಿಲ್ಲ ಆದರೆ ಅದರ ಸಾಮರ್ಥ್ಯದ ಬಗ್ಗೆ ಕಲ್ಪನೆಯನ್ನು ಪಡೆಯಲು ಅದನ್ನು ಪ್ರಾಯೋಗಿಕ ಆಧಾರದ ಮೇಲೆ ನೀಡಲು ಪ್ರಾರಂಭಿಸಿದೆ ಎಂದು ಮೇಯರ್‌ ತಿಳಿಸಿದ್ದಾರೆ. ಔಷಧಿ ಪರಿಣಾಮಕಾರಿ ಎಂದು ಕಂಡುಬಂದಲ್ಲಿ, ಅಧಿಕಾರಿಗಳು ಅದನ್ನು ಮತ್ತಷ್ಟು ಕಂಟೈನ್‌ಮೆಂಟ್‌ ಕೇಂದ್ರಗಳಲ್ಲಿ ಜನರಿಗೆ ವಿತರಿಸಲಿದ್ದಾರೆ ಎಂದು ಪೆಡ್ನ್ಕರ್‌ ಹೇಳಿದ್ದಾರೆ. ಬಿಎಂಸಿ ಮೂಲಕ ಸರಕಾರ ಕಳೆದ ಎರಡು ವಾರಗಳಲ್ಲಿ ಹೆಚ್ಚುವರಿ ಆರು ಕೋವಿಡ್‌ ಆರೈಕೆ  ಕೇಂದ್ರಗಳನ್ನು (ಸಿಸಿಸಿ) ಸ್ಥಾಪಿಸಿದೆ. ಈ ಕೇಂದ್ರ ಗಳಲ್ಲಿ ದಟ್ಟವಾದ ಕೊಳೆಗೇರಿ ಪ್ರದೇಶಗಳ ರೋಗ
ಲಕ್ಷಣವಿಲ್ಲದ ರೋಗಿಗಳನ್ನು ಇರಿಸಲಾಗುತ್ತದೆ. ಮಹಾಲಕ್ಷ್ಮೀ ರೇಸ್‌ಕೋರ್ಸ್‌, ನೆಹರು ವಿಜ್ಞಾನ  ಕೇಂದ್ರ, ಬಿಕೆಸಿಯ ಎಂಎಂಆರ್‌ಡಿಎ ಮೈದಾನ, ಮಾಹಿಮ್‌ ನೇಚರ್‌ ಪಾರ್ಕ್‌ ಮತ್ತು ಗೋರೆ
ಗಾಂವ್‌ನ ನೆಸ್ಕೋ ಮೈದಾನದಲ್ಲಿ ಹೊಸ ಸೌಲಭ್ಯ ಗಳನ್ನು ಅಭಿವೃದ್ಧಿಪಡಿಸಲಾಗಿದೆ. ಈ ಹೊಸ ಸೌಲಭ್ಯ ಗಳೊಂದಿಗೆ ಮುಂಬಯಿಯ ಒಟ್ಟು ಸಾಮರ್ಥ್ಯ ವನ್ನು 14,000 ದಿಂದ 34,000 ಹಾಸಿಗೆಗಳಿಗೆ ಹೆಚ್ಚಿಸಲಾಗಿದೆ.

ನಾಯರ್‌, ಕೆಇಎಂ, ಸೆವೆನ್‌ ಹಿಲ್ಸ್ ಮುಂತಾದ  ಆಸ್ಪತ್ರೆಗಳಲ್ಲಿ ಗಂಭೀರ ರೋಗಿಗಳ ಆರೈಕೆ ಹಾಸಿಗೆ ಗಳನ್ನು 3,000ದಿಂದ 4,750ಕ್ಕೆ ಹೆಚ್ಚಿಸಲಾಗಿದೆ. ಎನ್‌ಎಸ್‌ಸಿಐ ಡೋಮ್‌ನಲ್ಲಿ ಮೊಬೈಲ್‌ ಐಸಿಯು ಹಾಸಿಗೆಗಳನ್ನು ಕೂಡ ಯೋಜಿಸಲಾಗುತ್ತಿದೆ. ಕಂಟೈನ್‌ಮೆಂಟ್‌ ಮತ್ತು ಕೆಂಪು ವಲಯಗಳಲ್ಲಿ ಕೋವಿಡ್‌-19 ಹರಡುವುದನ್ನು ತಪ್ಪಿಸಲು ಬಿಎಂಸಿ ಮುಂಬಯಿಯ ನಿವಾಸಿಗಳನ್ನು ಸಂಪರ್ಕ ತಡೆಯಲ್ಲಿರಿಸಿಕೊಳ್ಳುತ್ತಿದೆ.

ಮಹಾರಾಷ್ಟ್ರದಲ್ಲಿ ಗುರುವಾರ ಕೋವಿಡ್‌ -19 ಪ್ರಕರಣಗಳ ಸಂಖ್ಯೆ 25,922ಕ್ಕೆ ಏರಿದ್ದು, ಕಳೆದ 24 ಗಂಟೆಗಳಲ್ಲಿ 1,000ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಕೋವಿಡ್‌-19ರಿಂದ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿರುವ ಮಹಾರಾಷ್ಟ್ರ ಸತತ 8ನೇ ದಿನಕ್ಕೆ 1,000ಕ್ಕೂ ಹೆಚ್ಚು ಹೊಸ ಪ್ರಕರಣಗಳನ್ನು ದಾಖಲಿಸಿಕೊಂಡಿದೆ. ರಾಜ್ಯವು ಒಂದೇ ಒಂದು ದಿನದಲ್ಲಿ 53 ಹೊಸ ಸಾವುಗಳನ್ನು ದಾಖಲಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next