Advertisement

ಬಡವರಿಗೆ ದಿನಸಿ ಕಿಟ್‌ ವಿತರಣೆ

03:51 PM Jul 05, 2020 | Suhan S |

ಕುಮಟಾ: ತಾಲೂಕಿನ ಕೋಡಕಣಿ ಗ್ರಾಪಂ ವ್ಯಾಪ್ತಿಯ ಐಗಳಕೂರ್ವೆ, ಬೆಲೆ ಹಾಗೂ ತಣ್ಣೀರಹೊಂಡ ಭಾಗದ 150ಕ್ಕೂ ಅಧಿಕ ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಶಾಸಕ ದಿನಕರ ಶೆಟ್ಟಿ ಅಗತ್ಯ ದಿನಸಿ ಕಿಟ್‌ ಹಾಗೂ ಮಾಸ್ಕ್ಗಳನ್ನು ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಕೋವಿಡ್ ದಿಂದ ದೇಶದಾದ್ಯಂತ ಜನರು ತೀವ್ರ ಸಂಕಷ್ಟ ಅನುಭವಿಸಿದ್ದಾರೆ. ಇಂಥ ವಿಷಮ ಸ್ಥಿತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿವಿಧ ರೀತಿಯಲ್ಲಿ ಜನರ ನೆರವಿಗೆ ಮುಂದಾಗಿದೆ. ಅಲ್ಲದೇ, ಸಕ್ಕರೆ ಸಚಿವರೂ ಸಹ ರಾಜ್ಯದ ಬಡವರಿಗಾಗಿ ಅಗತ್ಯ ದಿನಸಿ ಕಿಟ್‌ಗಳನ್ನು ವಿತರಿಸಿದ್ದಾರೆ. ಕಾರ್ಯಕರ್ತರ ಸಹಕಾರದಿಂದ ಅವುಗಳನ್ನು ಕ್ಷೇತ್ರದ ಬಡವರಿಗೆ ತಲುಪಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿದ್ದೇನೆ ಎಂದರು.

ಸ್ಥಳೀಯ ಮುಖಂಡರಿಂದ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದ ಅವರು, ಕೂಲಂಕಷವಾಗಿ ಎಲ್ಲವನ್ನೂ ಪರಿಶೀಲನೆ ನಡೆಸಿ, ಬಗೆಹರಿಸುವ ವಿಶ್ವಾಸ ನೀಡಿದರು. ಸ್ಥಳೀಯ ಮುಖಂಡ ಸುಬ್ರಾಯ ಪಟಗಾರ ಶಾಸಕರನ್ನು ಸ್ವಾಗತಿಸಿದರು.

ಮಂಡಲಾಧ್ಯಕ್ಷ ಹೇಮಂತಕುಮಾರ ಗಾಂವಕರ, ಗುತ್ತಿಗೆದಾರ ಮಂಜುನಾಥ ನಾಯ್ಕ, ಪ್ರಮುಖರಾದ ಸುಬ್ರಾಯ ಪಟಗಾರ, ಮಾದೇವ ಪಟಗಾರ, ಗಣಪತಿ ಪಟಗಾರ, ಪ್ರಕಾಶ ಪಟಗಾರ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next