Advertisement

ಮದುವೆ ಮನೆಯಲ್ಲಿ ಸಸಿ ವಿತರಿಸಿ ಪರಿಸರ ಜಾಗೃತಿ

03:02 PM Jun 17, 2019 | Team Udayavani |

ಗಂಗಾವತಿ: ತಾಲೂಕಿನ ಹಣವಾಳ ಗ್ರಾಮದ ಶಿಕ್ಷಕ ಜಗದೀಶ ರಸ್ತಾಪೂರ ಅವರ ಸರಳ ವಿವಾಹದಲ್ಲಿ ಮದುವೆಗೆ ಆಗಮಿಸಿದ್ದ ಪ್ರತಿಯೊಬ್ಬರಿಗೂ ಸಸಿ ವಿತರಿಸಿ ಪರಿಸರ ಜಾಗೃತಿ ಮೂಡಿಸಲಾಯಿತು. ತಮ್ಮ ಗುರುಗಳಿಗೆ ಶುಭ ಕೋರಲು ಆಗಮಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಉಚಿತವಾಗಿ ಇಂಗ್ಲಿಷ್‌ ಶಬ್ಧಕೋಶ ನೀಡುವ ಮೂಲಕ ಆದರ್ಶ ಮೆರೆದಿದ್ದಾರೆ. ಈ ಸಂದರ್ಭದಲ್ಲಿ ಜಗದೀಶ ರಸ್ತಾಪೂರ ಮಾತನಾಡಿ, ಮದುವೆಯ ಹೆಸರಿನಲ್ಲಿ ದುಂದುವೆಚ್ಚ ಹೆಚ್ಚಾಗಿದ್ದು, ಪರಿಸರ ಸಂರಕ್ಷಣೆ ಹಾಗೂ ಇತರರಿಗೆ ಉಪಯುಕ್ತವಾಗುವ ರೀತಿಯಲ್ಲಿ ಯೋಚಿಸಬೇಕು. ಮದುವೆಗಾಗಿ ಪೆಂಡಾಲ್ ಸೇರಿ ಭರ್ಜರಿ ಅಲಂಕಾರ ಮಾಡಿ ಹಣ ಪೋಲಾಗದಂತೆ ತಡೆಯಲು ಬಡಶಾಲಾ ಮಕ್ಕಳಿಗೆ ಅಥವಾ ವೃದ್ಧಾಶ್ರಮ, ಅನಾಥಶ್ರಾಮಗಳಿಗೆ ನೆರವಾಗಬೇಕು. ಗಿಡಮರಗಳ ಕೊರತೆಯಿಂದಾಗಿ ಮಳೆಯ ಬಾರದಂತಾಗಿದ್ದು, ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದರು. ಮದುವೆ ಆಗಮಿಸಿದ್ದ ಪ್ರತಿಯಯೊಬ್ಬರೂ ನೂತನ ದಂಪತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next