Advertisement

ಕೋವಿಡ್‌ ಪರೀಕ್ಷೆಗೆ ಅಡ್ಡಿ ಖಂಡನೀಯ: ಸುಮಲತಾ

12:57 PM Apr 26, 2020 | Suhan S |

ಮಂಡ್ಯ: ಪತ್ರಕರ್ತರ ಕೋವಿಡ್‌ ಪರೀಕ್ಷೆಗೆ ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅವರ ಪುತ್ರ ಹಾಗೂ ಸ್ಥಳೀಯ ರೊಂದಿಗೆ ಬಂದು ಅಡ್ಡಿಪಡಿಸಿರುವುದು ನನ್ನ ಗಮನಕ್ಕೂ ಬಂದಿದ್ದು, ಇದು ಖಂಡನೀಯ ಎಂದು ಸಂಸದೆ ಸುಮಲತಾ ಪ್ರತಿಕ್ರಿಯಿಸಿದ್ದಾರೆ.

Advertisement

ಮುಖ್ಯಮಂತ್ರಿಗಳ ಆದೇಶದಂತೆ ಪತ್ರಕರ್ತರನ್ನು ಕೋವಿಡ್‌ ಪರೀಕ್ಷೆಗೆ ಜಿಲ್ಲಾಡಳಿತ ಒಳಪಡಿಸಿ ಅವರಲ್ಲಿ ಆತ್ಮಸ್ಥೈರ್ಯ ತುಂಬುವುದು ಜಿಲ್ಲಾಡಳಿತದ ಉದ್ದೇಶವಾಗಿತ್ತು. ಇದನ್ನು ಅರ್ಥೈಸಿಕೊಳ್ಳದೆ ವಿಧಾನಪರಿಷತ್‌ ಸದಸ್ಯರು, ಮತ್ತವರ ಬೆಂಬಲಿಗರು ಸ್ಥಳಕ್ಕೆ ತೆರಳಿ ಅಡ್ಡಿಪಡಿಸಿದ್ದು ಸರಿಯಲ್ಲ. ಘಟನೆಗೆ ಸಂಬಂಧ ಕಾರ್ಯನಿರತ ಪತ್ರಕರ್ತರ ಸಂಘ ದೂರು ನೀಡಿರುವ ಬಗ್ಗೆ ಗೊತ್ತಾಗಿದ್ದು, ಇದೊಂದು ಶಿಕ್ಷಾರ್ಹ ಅಪರಾಧವಾಗಿರುವ ಹಿನ್ನೆಲೆಯಲ್ಲಿ ಇಂತಹ ಘಟನೆಗಳು ಮರುಕಳಿಸ ದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಕೋವಿಡ್‌ ವಾರಿಯರ್ಸ್‌ಗಳಿಗೆ ಸೂಕ್ತ ಭದ್ರತೆ ರಕ್ಷಣೆ ಒದಗಿಸುವಂತೆ ಜಿಲ್ಲಾಡಳಿತವನ್ನು ಸುಮಲತಾ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next