Advertisement

ಶಾಸಕ ಸ್ಥಾನ ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗಿಲ್ಲ: ಬಿ.ಸಿ ಪಾಟೀಲ್

09:29 AM Sep 14, 2019 | keerthan |

ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಅನರ್ಹ ಶಾಸಕರು ಶುಕ್ರವಾರ ಬೆಂಗಳೂರಿನ ಸುಧಾಕರ್ ಅವರ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಸಭೆಯ ನಂತರ ಮಾತನಾಡಿದ ಬಿ.ಸಿ ಪಾಟೀಲ್, ಶಾಸಕ ಸ್ಥಾನ ಹೋದ ಮಾತ್ರಕ್ಕೆ ಜೀವನ ಮುಗಿದು ಹೋಗಿಲ್ಲ. ನಮ್ಮ ಕ್ಷೇತ್ರದ ಕೆಲಸಗಳು ಆಗುತ್ತಿದೆ ಎಂದರು.

Advertisement

ಕೋರ್ಟ್ ವಿಚಾರದ ಮೇಲೆ ಮಾತಾಡಿಕೊಂಡಿದ್ದೇವೆ. ಶೀಘ್ರವಾಗಿ ವಿಚಾರಣೆಗೆ ಬರಲಿ ಅಂತ ಮನವಿ ಮಾಡಿದ್ದೇವೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಕೆಲಸಗಳ ಬಗ್ಗೆ ಮಾತಾಡ್ತಿದ್ದೇವೆ. ನಾವು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದಕ್ಕೆ ವಿಶೇಷ ಅರ್ಥ ಬೇಡ ಎಂದು ಬಿ ಸಿ ಪಾಟೀಲ್ ಹೇಳಿದರು

Advertisement

Udayavani is now on Telegram. Click here to join our channel and stay updated with the latest news.

Next