Advertisement

ತಜ್ಞರ ಸಮಿತಿ ಸದಸ್ಯರ ಅನರ್ಹತೆ ಅಸಾಧ್ಯ

01:27 AM Jan 20, 2021 | Team Udayavani |

ಹೊಸದಿಲ್ಲಿ: ಒಬ್ಬ ವ್ಯಕ್ತಿ ಒಂದು ವಿಚಾರದ ಬಗ್ಗೆ ಈ ಹಿಂದೆ ಯಾವುದೋ ಅಭಿಪ್ರಾಯ ವ್ಯಕ್ತಪಡಿಸಿದ್ದರು ಎಂಬ ಕಾರಣಕ್ಕಾಗಿ ಆ ವ್ಯಕ್ತಿಯನ್ನು ತಜ್ಞರ ಸಮಿತಿಯಿಂದ ಅನರ್ಹಗೊಳಿಸಲು ಸಾಧ್ಯವಿಲ್ಲ. ಏಕೆಂದರೆ, ಆ ವ್ಯಕ್ತಿಯ ಅಭಿಪ್ರಾಯವು ಮುಂದೆ ಬದಲಾಗಲೂಬಹುದು.

Advertisement

ಹೀಗೆಂದು ಹೇಳಿರುವುದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ. ಕೃಷಿ ಕಾಯ್ದೆ ಬಿಕ್ಕಟ್ಟು ಪರಿಹರಿಸಲೆಂದು ರಚಿಸಲಾದ ಸಮಿತಿಯ ಎಲ್ಲ ನಾಲ್ವರು ಸದಸ್ಯರೂ ಸರಕಾರದ ಕೃಷಿ ಕಾಯ್ದೆ ಪರವಾಗಿಯೇ ಮಾತನಾಡಿದ್ದರು ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಿಜೆಐ ಈ ಸ್ಪಷ್ಟನೆ ನೀಡಿದ್ದಾರೆ. ಸಮಿತಿಯಲ್ಲಿ ಸ್ಥಾನ ಪಡೆಯುವ ಮುನ್ನ ಸದಸ್ಯರು ಒಂದು ಅಭಿಪ್ರಾಯ ಹೊಂದಿದ್ದು, ಅನಂತ ರದಲ್ಲಿ ಅದು ಬದಲಾಗಬಹುದು. ನೇಮ ಕಕ್ಕೆ ಮುನ್ನ ಇದ್ದ ಅಭಿಪ್ರಾಯವೇ ಅನಂತ ರವೂ ಇರುತ್ತದೆಂದು ಹೇಳಲಾಗದು ಎಂದೂ ನ್ಯಾಯಪೀಠ ಹೇಳಿದೆ.

ಕಾಯ್ದೆ ರದ್ದು ಸರಿಯಲ್ಲ: ಮಂಗಳವಾರ ತಜ್ಞರ ಸಮಿತಿಯ ಮೊದಲ ಸಭೆ ನಡೆದಿದ್ದು, ನಾವೆಲ್ಲರೂ ಕೃಷಿ ಕಾಯ್ದೆ ಕುರಿತ ನಮ್ಮ ವೈಯಕ್ತಿಕ ಅಭಿಪ್ರಾಯ ಮತ್ತು ಸಿದ್ಧಾಂತಗಳನ್ನು ಬದಿಗಿರಿಸಿ ಕರ್ತವ್ಯ ಪೂರೈಸುತ್ತೇವೆ ಎಂದು ಸದಸ್ಯರು ಹೇಳಿದ್ದಾರೆ. ಇದರ ಜತೆಗೇ, ಕೃಷಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡುವುದು ಸರಿಯಲ್ಲ. ಹಾಗೆ ಮಾಡಿದರೆ ಕೃಷಿ ಕ್ಷೇತ್ರಕ್ಕೆ ಅಗತ್ಯವಾದ ಸುಧಾರಣೆ ತರಲು ಸಾಧ್ಯವಾಗದು ಎಂದೂ ಸಮಿತಿ ಸದಸ್ಯರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next