Advertisement

Constitution ಪೀಠಿಕೆ ಸಂಬಂಧ ಶಿಕ್ಷಣ ಸಚಿವ ವಿರುದ್ಧ ಹಕ್ಕುಚ್ಯುತಿ?

01:14 AM Aug 10, 2024 | Team Udayavani |

ಹೊಸದಿಲ್ಲಿ: ಎನ್‌ಸಿಇಆರ್‌ಟಿ ಪಠ್ಯಗಳಲ್ಲಿನ ಸಂವಿಧಾನ ಪೀಠಿಕೆ ಕುರಿತು ಸಚಿವ ಧರ್ಮೇಂದ್ರ ಪ್ರಧಾನ್‌ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆಂದು ಆರೋಪಿಸಿ ಕಾಂಗ್ರೆಸ್‌ನ ಜೈರಾಂ ರಮೇಶ್‌ ಹಕ್ಕುಚ್ಯುತಿ ನೋಟಿಸ್‌ ನೀಡಿದ್ದಾರೆ. ಈ ಕುರಿತು ಅವರು ರಾಜ್ಯಸಭಾ ಸಭಾಧ್ಯಕ್ಷರಿಗೆ ಪತ್ರ ನೀಡಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆ.7ರಂದು, ಎನ್‌ಸಿಇಆರ್‌ಟಿಯ 3 ಮತ್ತು 6ನೇ ತರಗತಿಯ ಪಠ್ಯದಿಂದ ಸಂವಿಧಾನದ ಪೀಠಿಕೆ ತೆಗೆದು ಹಾಕಲಾಗಿದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಧಾನ್‌, 6ನೇ ತರಗತಿಯ ಪಠ್ಯದಲ್ಲಿ ಈಗಲೂ ಪೀಠಿಕೆ ಇದೆ ಎಂದು ಹೇಳಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next