Advertisement

ಅತೃಪ್ತರು ಶಾಸಕಾಂಗ ಸಭೆಗೆ ಹಾಜರು

03:03 AM May 30, 2019 | Sriram |
ಬೆಂಗಳೂರು: ಪಕ್ಷದ ನಾಯಕರ ಜೊತೆ ಮುನಿಸಿಕೊಂಡು ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿಯೊಂದಿಗೆ ಗುರುತಿಸಿಕೊಂಡಿದ್ದ ಅತೃಪ್ತ ಶಾಸಕರು ಕಾಂಗ್ರೆಸ್‌ ಶಾಸಕಾಂಗ ಸಭೆಗೆ ಹಾಜರಾಗುವ ಮೂಲಕ ಕಾಂಗ್ರೆಸ್‌ ನಾಯಕ ರಲ್ಲಿದ್ದ ಆತಂಕ ದೂರ ಮಾಡಿದರು.

ಬಂಡಾಯ ಶಾಸಕ ರಮೇಶ್‌ ಜಾರಕಿಹೊಳಿಯನ್ನು ಹೊರತು ಪಡಿಸಿ ಅವರೊಂದಿಗೆ ಗುರುತಿಸಿಕೊಂಡು, ಬಿಜೆಪಿಯ ‘ಆಪರೇಷನ್‌ ಕಮಲ’ಕ್ಕೆ ತುತ್ತಾಗುತ್ತಾರೆ ಎಂದು ಹೇಳಲಾಗುತ್ತಿದ್ದ ಮಹೇಶ್‌ ಕುಮಠಳ್ಳಿ, ಬಿ.ಸಿ.ಪಾಟೀಲ್, ಡಾ.ಸುಧಾಕರ್‌, ಶರಣ ಬಸಪ್ಪ ದರ್ಶನಾಪುರ್‌, ಮಹಾಂತೇಶ್‌ ಕೌಜಲಗಿ, ಪ್ರತಾಪ್‌ಗೌಡ ಪಾಟೀಲ್, ಬಸನಗೌಡ ದದ್ದಲ್, ಭೀಮಾನಾಯ್ಕ, ಆನಂದ್‌ಸಿಂಗ್‌, ಶ್ರೀಮಂತ ಪಾಟೀಲ್, ಶಿವರಾಮ್‌ ಹೆಬ್ಟಾರ್‌ ಹಾಗೂ ಪಕ್ಷದಿಂದ ಅಮಾನತುಗೊಂಡಿದ್ದ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿದ್ದರು.

Advertisement

ಗಣೇಶ್‌ ಮೇಲಿನ ಅಮಾನತು ವಾಪಸ್‌: ಕಳೆದ ಜನವರಿಯಲ್ಲಿ ಬಿಡದಿ ರೆಸಾರ್ಟ್‌ನಲ್ಲಿ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಶಾಸಕ ಜೆ.ಎನ್‌.ಗಣೇಶ್‌ ಅವರನ್ನು ಅಮಾನತು ಮಾಡಿದ ಆದೇಶವನ್ನು ಕಾಂಗ್ರೆಸ್‌ ವಾಪಸ್‌ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next