Advertisement

ಸಚಿವ ಅಂಗಡಿಯೊಂದಿಗೆ ಚರ್ಚೆ

02:21 PM Jun 09, 2020 | mahesh |

ಬಳ್ಳಾರಿ: ಕೇಂದ್ರದ ರೈಲ್ವೆ ರಾಜ್ಯ ಖಾತೆ ಸಚಿವ ಸುರೇಶ್‌ ಅಂಗಡಿ ಅವರನ್ನು ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್‌ ಭೇಟಿಯಾಗಿ, ಬಳ್ಳಾರಿ ಅಭಿವೃದ್ಧಿಗೆ ಸಂಬಂಧಿಸಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು. ಸಚಿವ ಸುರೇಶ ಅಂಗಡಿ ಅವರನ್ನು ಸನ್ಮಾನಿಸಿದ ದಮ್ಮೂರು ಶೇಖರ್‌ ಅವರು, ಬಳ್ಳಾರಿಯ ಮೋತಿ ಸರ್ಕಲ್‌ ಪ್ಲೇ ಓವರ್‌, ಅಯ್ಯಪ್ಪ ಸ್ವಾಮಿ ದೇವಸ್ಥಾನದ ಹತ್ತಿರದ ರೈಲ್ವೆ ಸುರಂಗ ಮಾರ್ಗ, ಸುಧಾ ಕ್ರಾಸ್‌ ಪ್ಲೇ ಓವರ್‌ ಹಾಗೂ ಇತರೆ ರೈಲ್ವೆ ಕಾಮಗಾರಿಗಳ ಬಗ್ಗೆ ಸಚಿವರು ಹಾಗೂ ಅಧಿ ಕಾರಿಗಳೊಂದಿಗೆ
ಚರ್ಚೆ ನಡೆಸಿದರು. ಬಳ್ಳಾರಿ ಅಭಿವೃದ್ಧಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ ಎಂದು ಬುಡಾ ಅಧ್ಯಕ್ಷ ದಮ್ಮೂರು ಶೇಖರ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next