Advertisement

ಕಾಮಗಾರಿ ಕಳಪೆಯಾದರೆ ಶಿಸ್ತು ಕ್ರಮ: ಶಾಸಕ ಸಿದ್ದು

12:10 PM Jun 29, 2019 | Team Udayavani |

ಬಾದಾಮಿ: ವಿವಿಧ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದಿಂದ ನಿರ್ವಹಣೆ ಮಾಡಿ ಮುಗಿಸಬೇಕು. ಕಳಪೆ ಕಾಮಗಾರಿ ಕಂಡು ಬಂದರೆ ಕ್ರಮ ನಿಶ್ಚಿತ ಎಂದು ಮಾಜಿ ಸಿಎಂ, ಶಾಸಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Advertisement

ಅವರು ರಾಮದುರ್ಗ ರಸ್ತೆಯ ಶಾಸಕರ ಗೃಹ ಕಚೇರಿಯಲ್ಲಿ ರಸ್ತೆ ಸುಧಾರಣೆ, ಶಾಲಾ ಕೊಠಡಿ ನಿರ್ಮಾಣ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ಮಾಡಿ ಚಾಲನೆ ನೀಡಿ ಮಾತನಾಡಿದರು.

ಲೋಕೋಪಯೋಗಿ, ಜಿ.ಪಂ ಸೇರಿದಂತೆ ವಿವಿಧ ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ, ಗುಣಮಟ್ಟದಿಂದ ಮಾಡಬೇಕು. ಕಳಪೆ ಮಾಡಿದರೆ ಅಂಥ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮಾಜಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ, ಎಚ್.ವೈ. ಮೇಟಿ, ಮುಖಂಡರಾದ ಎಂ.ಬಿ. ಹಂಗರಗಿ, ಡಾ. ಎಂ. ಜಿ. ಕಿತ್ತಲಿ, ಡಾ.ಎಂ.ಎಚ್. ಚಲವಾದಿ, ಎಂ. ಡಿ. ಎಲಿಗಾರ, ಹೊಳಬಸು ಶೆಟ್ಟರ, ಮಹೇಶ ಹೊಸಗೌಡ್ರ, ಮಹಾಂತೇಶ ಹಟ್ಟಿ, ರಾಜಮಹಮ್ಮದ ಬಾಗವಾನ, ಎಸ್‌.ಡಿ.ಜೋಗಿನ, ಪಿ.ಆರ್‌.ಗೌಡರ, ಮಧು ಯಡ್ರಾಮಿ, ಶಶಿಕಾಂತ ಉದಗಟ್ಟಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next