Advertisement

ಆರ್‌ಜೆಡಿಯೊಳಗೂ ಭಿನ್ನಮತ

12:13 AM May 28, 2019 | Team Udayavani |

ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಬಿಹಾರದ ಆರ್‌ಜೆಡಿಯಲ್ಲೂ ಭಿನ್ನಮತ ಸ್ಫೋಟಗೊಂಡಿದೆ. ಸೋಲಿನ ನೈತಿಕ ಹೊಣೆ ಹೊತ್ತು ತೇಜಸ್ವಿ ಯಾದವ್‌ ಅವರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪಕ್ಷದ ಹಿರಿಯ ಶಾಸಕ ಮಹೇಶ್ವರ್‌ ಪ್ರಸಾದ್‌ ಯಾದವ್‌ ಆಗ್ರಹಿಸಿದ್ದಾರೆ. ಪಕ್ಷ ಸೋಲು ಕಾಣಲು ಪರಿವಾರ್‌ವಾದ್‌ (ವಂಶಾಡಳಿತ)ವೇ ಕಾರಣ ಎಂದಿರುವ ಅವರು, ತೇಜಸ್ವಿ ರಾಜೀನಾಮೆ ನೀಡದಿದ್ದರೆ ಪಕ್ಷ 2 ಹೋಳಾಗುವುದು ಖಚಿತ ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ಶೀಘ್ರದಲ್ಲೇ ಉ.ಪ್ರ. ಸಂಪುಟ ಪುನಾರಚನೆ
ಲೋಕಸಭೆ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿಯ ಭರ್ಜರಿ ಜಯದಿಂದಾಗಿ ಈಗ ಸಂಪುಟ ಪುನಾರಚನೆಯ ಅನಿವಾರ್ಯತೆ ಉಂಟಾಗಿದೆ. ರಾಜ್ಯದ ಮೂವರು ಸಚಿವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ. ಅಲ್ಲದೆ ಒಬ್ಬ ಸಚಿವರನ್ನು(ರಾಜ್‌ಭರ್‌) ಈಗಾಗಲೇ ವಜಾ ಮಾಡಲಾಗಿದೆ. ಹೀಗಾಗಿ 4 ಸಚಿವ ಸ್ಥಾನ ಖಾಲಿಬಿದ್ದಿದ್ದು, ಅದನ್ನು ಭರ್ತಿ ಮಾಡಲು ಸದ್ಯದಲ್ಲೇ ಯೋಗಿ ಸರಕಾರ ಸಂಪುಟ ಪುನಾರಚನೆಗೆ ಕೈಹಾಕಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next