Advertisement

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

07:19 PM Jul 29, 2021 | Team Udayavani |

ವಾಡಿ (ಚಿತ್ತಾಪುರ): ಪದೇಪದೇ ಸರಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿರುವ ಅಂಗವಿಕಲ ನೋರ್ವ ಕಣ್ಣೀರು ಹಾಕುತ್ತಲೆ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉಗ್ರವಾಗಿ ವರ್ತಿಸಿದ ಘಟನೆ  ಗುರುವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

Advertisement

ಪಟ್ಟಣದ ನಿವಾಸಿ ಧರ್ಮ ರಾಥೋಡ್, ಸರಕಾರಿ ಸೌಲಭ್ಯಗಳಿಂದ ವಂಚಿತವಾದ ಅಂಗವಿಕಲ. ಸ್ಥಳೀಯ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸೇವೆ ನಿರ್ವಹಿಸುತ್ತಿದ್ದ ಈತ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿ ಇದ್ದ ತಾತ್ಕಾಲಿಕ ಉದ್ಯೋಗವೂ ಕೈತಪ್ಪಿತು. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಲಭಿಸಲಿದೆ ಎಂಬ ಆಶಾಭಾವನೆಯಿಂದ ಉಳಿಸಿ ಅನುದಾನ ಬೀದಿಗೆ ಬಿದ್ದಿರುವ ಈ ವಿಕಲಾಂಗ ವ್ಯಕ್ತಿ, ಸಾಕಲು ಸಾದ್ಯವಾಗದೆ ಹೆಂಡರು ಮಕ್ಕಳನ್ನು ತವರಿಗೆ ಕಳುಹಿಸಿ ಗೋಳಾಡುತ್ತಿದ್ದಾನೆ. ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾನೆ.

ಇತ್ತೀಚೆಗೆ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಯವರು ಪುರಸಭೆ ಅನುದಾನದಲ್ಲಿ ಖರೀದಿಸಲಾಗಿದ್ದ ತ್ರೀಚಕ್ರ ವಾಹನಗಳನ್ನು ಇತರ ಅಂಗವಿಕಲರಿಗೆ ನೀಡಿರುವ ಸುದ್ದಿ ತಿಳಿದು ಕೆಂಡಾಮಂಡಲವಾದ ವಿಕಲಾಂಗ ಧರ್ಮಸಿಂಗ್ ರಾಠೋಡ, ನೇರವಾಗಿ ಪುರಸಭೆ ಕಚೇರಿಗೆ ಆಗಮಿಸುವ ಮೂಲಕ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ ಅವರೊಂದಿಗೆ ವಾಗ್ವಾದ ನಡೆಸಿದ್ದಾನೆ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ರೂ. ವಂಚನೆ

ಎಲ್ಲರಿಗೂ ಪದೇಪದೇ ವಿವಿಧ ಸೌಲತ್ತುಗಳನ್ನು ಓದಗಿಸುತ್ತೀರಿ. ಕಾಲುಗಳಿಲ್ಲದ ನನಗೇಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸುವ ಮೂಲಕ ಕಚೇರಿಯಲ್ಲೇ ಕೂಗಾಡಿದ್ದಾನೆ. ಕೋಪ ನೆತ್ತಿಗೇರಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ನಾನೇ ತಪ್ಪು ಮಾಡಿದ್ದೇನೆ? ಮನೆ ಕಟ್ಟಲು ಮಂಜೂರಾದ ಸರಕಾರದ ಸಹಾಯಧನ ಕೈ ಸೇರಲಿಲ್ಲ. ಉರುಳಿಸಿದ ಗುಡಿಸಲು ಮನೆ ಪುನಃಹ  ಕಟ್ಟಿಕೊಳ್ಳಲು ಸಾಧ್ಯವಾಗದೆ ಬೀದಿಗೆ ಬಿದ್ದಿದ್ದೇನೆ. ಕೊರೊನಾ ಲಾಕ್ಡೌನ್ ದಿಂದಾಗಿ  ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಕೆಲಸವೂ ಹೋಗಿದೆ. ಯಾವೂದೇ ಪರಿಹಾರ ಸಿಕ್ಕಿಲ್ಲ.

Advertisement

ಈಗ ತ್ರೀಚಕ್ರ ವಾಹನದಿಂದಲೂ ವಂಚಿಸಿದ್ದೀರಿ. ನಾನು ಎಲ್ಲಿ ಹೋಗಿ ಸಾಯಲಿ? ನನಗೇಕೆ ಈ ಕಷ್ಟ? ನಾನು ಭೂಮಿ ಮೇಲೆ ಬದುಕಬಾರದೇ? ನಾನು ಮಾಡಿದ ಪಾಪವಾದರೂ ಏನು? ನಾನು ಅಂಕವಿಕಲನಲ್ಲವೇ? ಹೆಂಡರು ಮಕ್ಕಳಿಂದ ದೂರ ಇದ್ದು ದಿನವೂ ಸಾಯುತ್ತಿದ್ದೇನೆ. ಸೌಲಭ್ಯ ಕೊಡಿ ಅಥವ ಪುರಸಭೆ ಕಚೇರಿ ಮುಂದೇ ನನಗೆ ವಿಷ ಕೊಟ್ಟು ಸಾಯಿಸಿಬಿಡಿ. ಸಾಕಾಗಿದೆ ಈ ಜೀವನ ಎಂದು ಅವಲತ್ತುಕೊಂಡ ಪ್ರಸಂಗ ನಡೆದಿದೆ.

ಅಂಗವಿಕಲನ ಗೋಳಾಟ ತಿಳಿದು ಮೂಖವಿಸ್ಮಿತರಾದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಧರ್ಮಸಿಂಗ್ ನನ್ನು ಸಮಾಧಾನಪಡಿಸಲು ಮುಂದಾದರು. ಯಾವುದಕ್ಕೂ ಜಗ್ಗದ ನೋಂದ ಅಂಗವಿಕಲ ಧರ್ಮಸಿಂಗ್, ನನಗೆ ನ್ಯಾಯ ಕೊಡಿ ಎಂದು ಪಟ್ಟು ಹಿಡಿದು ಏಕಾಂಗಿಯಾಗಿಯೇ ಪ್ರತಿಭಟಿಸಿ ಪುರಸಭೆ ಆಡಳಿತವನ್ನೇ ನಡುಗಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next