Advertisement

ವಿಕಲಚೇತನರ ಜತೆಸಮಾಲೋಚನೆ

12:50 PM May 10, 2018 | |

ಬೆಂಗಳೂರು: ಬಸವವನಗುಡಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆ. ಬಾಗೇಗೌಡ, ಬುಧವಾರ ಹನುಂತನಗರ ಸೇರಿದಂತೆ ಸುತ್ತಮುತ್ತಲ ಭಾಗಗಳಲ್ಲಿ ಬಿರುಸಿನ ಮತಯಾಚನೆ ಮಾಡಿದರು. ನೂರಾರು ಕಾರ್ಯಕರ್ತರ ಜತೆ ಮನೆ ಮನೆ ಮತಯಾಚನೆ ನಡೆಸಿದ ಬಾಗೇಗೌಡ ಅವರು, ಕ್ಷೇತ್ರದ ಅಭಿವೃದ್ಧಿಯ ಗುರಿ ಹೊಂದಿರುವ ತಮ್ಮನ್ನು ಈ ಬಾರಿ ಶಾಸಕನಾಗಿ ಆಯ್ಕೆ ಮಾಡುವಂತೆ ಮನವಿ ಮಾಡಿದರು. ಸ್ಥಳೀಯ ಕಾರ್ಯಕರ್ತರು
ಮತ್ತು ವಿಶೇಷ ಚೇತನ ಮತದಾರರೊಂದಿಗೆ ಸಮಾಲೋಚನೆ ನಡೆಸಿ ಅವರ ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

Advertisement

 ಹರಿಜನ ಕಾಲೋನಿ ಹಕ್ಕುಪತ್ರ ವಿತರಣೆ, ಸ್ಥಗಿತಗೊಂಡಿರುವ ಬೋರ್‌ವೆಲ್‌ಗ‌ಳ ಪುನರ್‌ ಚಾಲನೆ , ರಾತ್ರಿ ವೇಳ ಸರಗಳ್ಳತನ ತಡೆಯಲು ಸೂಕ್ತ ಕ್ರಮದ ಭರವಸೆ ನೀಡುವಂತೆ ಸ್ಥಳೀಯವರು ಮನವಿ ಆಲಿಸಿದರು, ಅಲ್ಲದೆ, ತಾವು ಶಾಸಕನಾಗಿ ಆಯ್ಕೆಯಾದರೆ ತಮ್ಮೆಲ್ಲ ಸಮಸ್ಯೆಗಳನ್ನು ಪರಿಹರಿಸುವುದಾಗಿ ತಿಳಿಸಿದರು. ಜತೆಗೆ ಕೆಂಪೇಗೌಡ ಈಜುಕೊಳವನ್ನು ಸಂಪೂರ್ಣವಾಗಿ ಮಹಿಳೆಯರ ಬಳಕೆಗೆ ಮಾತ್ರ ಅವಕಾಶ ಕಲ್ಪಿಸಲು ಮುಂದಾಗುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next