Advertisement

‘ಡಿ ಬಾಸ್ ಅಂದರೆ ಬರಿ ಹೆಸರಲ್ಲ ಅದು ಕನ್ನಡಿಗರ ಆಸ್ತಿ’

04:07 PM Jul 21, 2021 | Team Udayavani |

ಬೆಂಗಳೂರು : ಕನ್ನಡ ಚಿತ್ರರಂಗದ ನಟ ದರ್ಶನ್ ಸುತ್ತ ಹುಟ್ಟಿಕೊಳ್ಳುತ್ತಿರುವ ವಿವಾದಗಳ ವಿರುದ್ಧ ಅವರ ಅಭಿಮಾನಿಗಳು ಹಾಗೂ ಸ್ನೇಹಿತರು ಗರಂ ಆಗಿದ್ದಾರೆ. ಹಾಗೂ ನಮ್ಮ ನೆಚ್ಚಿನ ನಾಯಕನ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.

Advertisement

ಇದೀಗ ರಾಜಾಹುಲಿ ಖ್ಯಾತಿಯ ನಿರ್ದೇಶಕ ಗುರು ದೇಶಪಾಂಡೆ ಅವರು ಸ್ಯಾಂಡಲ್ವುಡ್ ಯಜಮಾನ ಡಿ ಬಾಸ್ ಬೆಂಬಲಕ್ಕೆ ನಿಂತಿದ್ದು, ಡಿ ಬಾಸ್ ಅಂದರೆ ಬರಿ ಹೆಸರಲ್ಲ ಡಿ ಬಾಸ್ ಕನ್ನಡಿಗರ ಆಸ್ತಿ ಮತ್ತು ದೊಡ್ಡ ಶಕ್ತಿ ಎಂದಿದ್ದಾರೆ.

ದರ್ಶನ್ ಅವರಿಗೆ ಬೆಂಬಲ ಸೂಚಿಸಿ ಫೇಸ್ ಬುಕ್ ಪೋಸ್ಟ್ ಮಾಡಿರುವ ಗುರು ದೇಶಪಾಂಡೆ, ‘ಆನೆ ನಡೆದಿದ್ದೆ ದಾರಿ.ಇದನ್ನು ಯಾರು ಮರೆಯಬಾರದು ಅಭಿಮಾನ ಎನ್ನುವುದು ಚಿತ್ರ ನೋಡಿದಾಗ ಮಾತ್ರ ಬರುವುದಿಲ್ಲ. ಚಿತ್ರರಂಗಕ್ಕೆ ಬರುವ ಮೊದಲು ಅವರು ಪಟ್ಟಿರುವ ಕಷ್ಟ, ಚಿತ್ರರಂಗದಲ್ಲಿ ನಡೆದು ಬಂದ ಹಾದಿಯಿಂದ ಬರುವಂತದ್ದು. ಜೊತೆಗೆ ಯಾರಿಗೂ ಗೊತ್ತಾಗದಂತೆ ಮಾಡುವ ನಿಸ್ವಾರ್ಥ ಸಹಾಯ.ಮೂಕ ಪ್ರಾಣಿಗಳಿಗೆ ತೋರಿಸುವ ಪ್ರೀತಿ ಮತ್ತು ಮೂಕ ಪ್ರಾಣಿಗಳ ರಕ್ಷಣೆಗೆ ರಾಜನಂತೆ ನಿಂತ ರೀತಿ  ಇಂತಹ ನೂರಾರು ಗುಣಗಳಿರುವ ಬೃಹತ್ ಶಿಖರ ನಮ್ಮ

ಡಿ ಬಾಸ್ ಎಂದಿರುವ ದೇಶಪಾಂಡೆ, ಯಾರು ಏನೇ ಅಂದರೂ ನಿಮ್ಮ ಪರವಾಗಿ ಸದಾಕಾಲ ನಿಮ್ಮ ಅಭಿಮಾನಿಗಳಾದ ನಾವು ಇದ್ದೆ ಇರುತ್ತೇವೆ ಎಂದು ನೈತಕ ಸ್ಥೈರ್ಯ ತುಂಬಿದ್ದಾರೆ.

ಇನ್ನು ಮೈಸೂರಿನ ಹೋಟೆಲ್ ವೇಟರ್ ಮೇಲೆ ದರ್ಶನ್ ಅವರು ಹಲ್ಲೆ ಮಾಡಿದ್ದಾರೆ ಎಂದು ಪತ್ರಕರ್ತ ಹಾಗೂ ಸಿನಿಮಾ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಆರೋಪ ಮಾಡಿದ್ದಾರೆ. ಇದರ ಜೊತೆಗೆ ದೊಡ್ಮನೆ ಆಸ್ತಿ ವಿಚಾರವು ಮುಂಚೂಣಿಗೆ ಬಂದಿದೆ. ಹಾಗೂ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಹಾಗೂ ದರ್ಶನ್ ನಡುವೆಯೂ ಸಂಘರ್ಷ ಏರ್ಪಟ್ಟಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next