Advertisement

Hindu: ಹಿಂದುತ್ವ ರಕ್ಷಣೆಗೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ: ಅರ್ಜಿ ವಜಾ

09:31 PM Nov 10, 2023 | Pranav MS |

ನವದೆಹಲಿ: ಭಾರತದಲ್ಲಿ ಹಿಂದುತ್ವವನ್ನು ರಕ್ಷಿಸುವ ನಿಟ್ಟಿನಲ್ಲಿ ಹೊಸ ಮಾರ್ಗಸೂಚಿಗಳನ್ನು ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದೆ. ನ್ಯಾ. ಸಂಜಯ್‌ ಕಿಶನ್‌ ಕೌಲ್‌ ಅವರ ನೇತೃತ್ವದ ನ್ಯಾಯಪೀಠವು ಇಂಥ ಮನವಿಗಳನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದಿದೆ.

Advertisement

ಉತ್ತರಪ್ರದೇಶ ಮೂಲದ ಅರ್ಜಿದಾರರು ಪಠ್ಯಕ್ರಮಗಳನ್ನು ಉಲ್ಲೇಖೀಸಿ ಅದರಲ್ಲಿ ಹಿಂದೂಧರ್ಮ ಕಣ್ಮರೆಯಾಗುತ್ತಿದೆ ಎನ್ನುವಂಥ ನಿಟ್ಟಿನಲ್ಲಿ ದೇಶದಲ್ಲಿ ಹಿಂದುತ್ವದ ರಕ್ಷಣೆಗೆ ಮಾರ್ಗಸೂಚಿ ಕೋರಿದ್ದರು. ಆದರೆ ಅರ್ಜಿಯನ್ನು ಆಲಿಸಲು ನ್ಯಾಯಪೀಠ ನಿರಾಕರಿಸಿ. ಕೆಲವರು ಭಾರತದಲ್ಲಿ ಇಸ್ಲಾಂ ಅನ್ನು ರಕ್ಷಿಸಿ ಎನ್ನುತ್ತಾರೆ, ಇನ್ನೂ ಕೆಲವರು ಭಾರತದಲ್ಲಿ ಕ್ರೈಸ್ತ ಧರ್ಮವನ್ನು ರಕ್ಷಿಸಿ ಎನ್ನುತ್ತಾರೆ. ಈಗ ನೀವು ರಕ್ಷಣೆಗೆ ಮಾರ್ಗಸೂಚಿ ನೀಡಿ ಎನ್ನುತ್ತಿದ್ದೀರಿ, ಇಂಥದ್ದನ್ನೆಲ್ಲ ಪುರಸ್ಕರಿಸಲು ಸಾಧ್ಯವಿಲ್ಲ. ಯಾರು ಏನು ಮಾಡಬೇಕು ಎಂಬುದನ್ನು ನೀವು ಹೇಳಲಾಗದು ಎಂದಿದೆ.

 

Advertisement

Udayavani is now on Telegram. Click here to join our channel and stay updated with the latest news.

Next