Advertisement

39th birthday; ಎಲ್ಲ ಮಾದರಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ದಿನೇಶ್ ಕಾರ್ತಿಕ್

10:49 PM Jun 01, 2024 | Team Udayavani |

ಚೆನ್ನೈ: ಐಪಿಎಲ್‌ ಎಲಿಮಿನೇಟರ್‌ನಲ್ಲಿ ರಾಜಸ್ಥಾನ್‌ ವಿರುದ್ಧ ಆರ್‌ಸಿಬಿ ಸೋಲುತ್ತಲೇ, ತಂಡದ ವಿಕೆಟ್‌ ಕೀಪರ್‌-ಬ್ಯಾಟರ್‌ ದಿನೇಶ್‌ ಕಾರ್ತಿಕ್‌ ನಿವೃತ್ತಿ ಘೋಷಿಸಿದ್ದರು. ಇದೀಗ ಎಲ್ಲ ಮಾದರಿಗಳ ಕ್ರಿಕೆಟಿಗೂ ಗುಡ್‌ಬೈ ಹೇಳಿದ್ದಾರೆ. ಇದರೊಂದಿಗೆ ಅವರ ಎರಡು ದಶಕಗಳ ಕ್ರಿಕೆಟ್‌ ಜೀವನಕ್ಕೆ ತೆರೆ ಬಿದ್ದಿದೆ. ತನ್ನ ಈ ನಿರ್ಧಾರಕ್ಕೆ ದೈಹಿಕ ಸಮಸ್ಯೆ ಕಾರಣವಲ್ಲ, ಮಾನಸಿಕ ವಿಚಾರ ಕಾರಣ ಎಂದು ಕಾರ್ತಿಕ್‌ ಹೇಳಿದರು.

Advertisement

“ನಾನು ಇನ್ನೊಂದು ಋತುವನ್ನು ತಳ್ಳಿಬಿಡಬಹುದಿತ್ತು. ನನ್ನ ಬದುಕಿನಲ್ಲಿ ಹೆಚ್ಚಿನ ಸಮಸ್ಯೆಗಳೇನೂ ಇಲ್ಲ. ನನ್ನ ದೇಹ ಮತ್ತು ಫಿಟ್‌ನೆಸ್‌ ಬಗ್ಗೆ ನಾನೆಂದೂ ಚಿಂತೆ ಮಾಡಿಲ್ಲ. ಆದರೆ ಇವೆಲ್ಲ ಮಾನಸಿಕ ಸಂಗತಿಗೆ ಸಂಬಂಧಿಸಿದ ವಿಚಾರವಾಗಿದೆ’ ಎಂದಿದ್ದಾರೆ.

“ಇನ್ನೂ ದೀರ್ಘ‌ ಕಾಲ ನಾನು ಆಡಲು ಯತ್ನಿಸಿಸಬಹುದಿತ್ತು. ಆದರೆ ಕೆಲವು ಪಂದ್ಯಗಳಲ್ಲಿ ನಾನು ಎಡವಿದರೂ ಸಾಕು ನನ್ನಿಂದ ಅದನ್ನು ಮಾನಸಿಕವಾಗಿ ಸಹಿಸಿಕೊಳ್ಳಲು ಕಷ್ಟವಾಗುತ್ತದೆ. ಆ ಬಳಿಕ ನಾನು ತಪ್ಪಿತಸ್ಥ ಭಾವನೆಯೊಂದಿಗೆ ಬದುಕ ಬೇಕಾಗುತ್ತದೆ. ಇದೇ ಕಾರಣಕ್ಕೆ ತಾನು ನಿವೃತ್ತಿ ನಿರ್ಧಾರ ತಾಳಿದ್ದೇನೆ’ ಎಂಬುದಾಗಿ ಕಾರ್ತಿಕ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next