Advertisement

ದಿನೇಶ್‌ ಗುಂಡೂರಾವ್‌ ಕೀಳುಮಟ್ಟದ ಹೇಳಿಕೆ

12:22 PM Apr 15, 2018 | |

ಬೆಂಗಳೂರು: “ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಶಾಸಕನ ರಕ್ಷಣೆಗೆ ನಿಂತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ,’ ಎನ್ನುವ ಮೂಲಕ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌ ಕೀಳುಮಟ್ಟದ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ನಗರದ ಆನಂದ ರಾವ್‌ ವೃತ್ತದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು, “ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅಲ್ಲ ಬೋಗಿ ಆದಿತ್ಯನಾಥ್‌. ಅವನು ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ನಾಲಾಯಕ್‌. ಕೂಡಲೇ ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್‌ನನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತೂಗೆಯಬೇಕು,’ ಎಂದು ಒತ್ತಾಯಿಸಿದರು.

“ಯೋಗಿ ಆದಿತ್ಯನಾಥ್‌ ಕರ್ನಾಟಕಕ್ಕೆ ಬಂದರೆ, ರಾಜ್ಯಕ್ಕೆ ಅವಮಾನವಾಗುತ್ತದೆ. ಅವನು ಏನಾದರೂ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಿಂದ ಹೊಡೆಯಿರಿ,’ ಎಂದು ವಿವಾದಾತ್ಮಕ ಮಾತುಗಳನ್ನಾಡಿದರು. ಮಾಜಿ ಮೇಯರ್‌ ಪದ್ಮಾವತಿ ಮಾತನಾಡಿ, ಉತ್ತರ ಪ್ರದೇಶದಲ್ಲಿ ಮಹಿಳೆ, ಕಾಶ್ಮೀರದಲ್ಲಿ ಮಗುವಿನ ಮೇಲೆ ಅತ್ಯಾಚಾರ ನಡೆದಿದೆ. ಆದರೆ, ಪ್ರಧಾನಿ ಯಾವುದೇ ಕ್ರಮ ಕೈಗೊಂಡಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಅತ್ಯಾಚಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ನಾಲಿಗೆ ಆಚಾರ ತೋರಿಸುತ್ತದೆ. ನಂದಿ ಹೋಗಲಿರುವ ದೀಪ ಕೊನೆಗಳಿಗೆಯಲ್ಲಿ ಜೋರಾಗಿ ಉರಿದು ನಶಿಸಿಹೋಗುತ್ತದೆ. ಯೋಗಿಗಳ ಬಗ್ಗೆ ಮಾತನಾಡುವ ಭೋಗಿಗಳಿಗೆ ಸದ್ಯದಲ್ಲೇ ವಿನಾಶ ಕಾದಿದೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥರ ಬಗ್ಗೆ ದಿನೇಶ್‌ಗುಂಡೂರಾವ್‌ ಅವರು ಕೀಳಾಗಿ ಮಾತನಾಡಿರುವ ಬಗ್ಗೆ ಖೇದವೆನಿಸುತ್ತದೆ.
-ಡಿ.ವಿ.ಸದಾನಂದಗೌಡ

Advertisement

Udayavani is now on Telegram. Click here to join our channel and stay updated with the latest news.

Next