Advertisement

ಪವರ್ ಸ್ಟಾರ್ ಪುನೀತ್ ಗೆ ದಿನಕರ್ ತೂಗುದೀಪ್ ಆ್ಯಕ್ಷನ್ ಕಟ್ ?

03:09 PM Feb 22, 2021 | Team Udayavani |

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ನವಗ್ರಹ, ಸಾರಥಿಯಂತಹ ಬ್ಲಾಕ್ ಬಸ್ಟರ್ ಸಿನಿಮಾ ನೀಡಿರುವ ದಿನಕರ್ ತೂಗುದೀಪ್ ಹೊಸ ಚಿತ್ರದೊಂದಿಗೆ ಮತ್ತೆ ನಿರ್ದೇಶಕರ ಕ್ಯಾಪ್ ತೊಡುತ್ತಿದ್ದಾರೆ. ಈ ಬಾರಿ ಅವರು ಚಂದನವನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ.

Advertisement

ಹೌದು, ಸದ್ಯ ಗಾಂಧಿನಗರದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ ಅಪ್ಪು ಅವರ ಮುಂದಿನ ಚಿತ್ರಕ್ಕೆ ದಿನಕರ್ ನಿರ್ದೇಶನ ಮಾಡಲಿದ್ದಾರಂತೆ. ಲಾಕ್ ಡೌನ್ ವೇಳೆ ಸುಂದರವಾದ ಕಥೆ ಹೆಣೆದಿರುವ ದಿನಕರ್, ಈ ಸಿನಿಮಾ ಕುರಿತು ಪುನೀತ್ ಜತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರಂತೆ. ಅಪ್ಪು ಅವರಿಗೆ ಕಥೆ ಇಷ್ಟವಾಗಿದ್ದು ಅಭಿನಯಿಸಲು ಅನುಮತಿ ಕೂಡ ನೀಡಿದ್ದಾರಂತೆ. ಆದರೆ, ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ.

ಸದ್ಯ ಪುನೀತ್ ರಾಜಕುಮಾರ ತಮ್ಮ ಯುವರತ್ನ ಸಿನಿಮಾ ಬಿಡುಗಡೆ ಎದುರು ನೋಡುತ್ತಿದ್ದಾರೆ. ರಾಜಕುಮಾರ ಸಿನಿಮಾ ನಂತರ ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ಅಪ್ಪು ಕಾಂಬಿನೇಶನ್ ಎರಡನೇ ಸಿನಿಮಾ ‘ಯುವರತ್ನ’ ಏಪ್ರಿಲ್ 1 ರಂದು ಬೆಳ್ಳಿ ಪರದೆ ಮೇಲೆ ರಾರಾಜಿಸಲಿದೆ. ಇದರ ಜತೆಗೆ ಬಹದ್ದೂರ್  ಚೇತನ್ ಕುಮಾರ್ ನಿರ್ದೇಶನದ ಜೇಮ್ಸ್ ಚಿತ್ರದ ಶೂಟಿಂಗ್ ನಲ್ಲಿ ಅಪ್ಪು ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಶೂಟಿಂಗ್ ಮುಗಿದ ಮೇಲೆ ದಿನಕರ್ ಜತೆಗಿನ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next