Advertisement

ದಿಲ್‌ ದೇ “ದಿಯಾ’

10:08 AM Feb 08, 2020 | Lakshmi GovindaRaj |

ಕೆಲ ವರ್ಷಗಳ ಹಿಂದೆ ತೆರೆಗೆ ಬಂದಿದ್ದ “6-5=2′ ಎನ್ನುವ ಹೆಸರಿನ ಹಾರರ್‌ ಚಿತ್ರ ನಿಮಗೆ ಗೊತ್ತಿರಬಹುದು. ಸ್ಯಾಂಡಲ್‌ವುಡ್‌ ಸಿನಿಪ್ರಿಯರನ್ನು ಥಿಯೇಟರ್‌ನಲ್ಲಿ ಬೆಚ್ಚಿ ಬೀಳಿಸಿ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದ್ದ ಇದೇ ಚಿತ್ರತಂಡ ಈಗ ಸದ್ದಿಲ್ಲದೆ ಮತ್ತೂಂದು ಚಿತ್ರವನ್ನು ತೆರೆಗೆ ತರುತ್ತಿದೆ. ಅಂದಹಾಗೆ ಆ ಚಿತ್ರದ ಹೆಸರು “ದಿಯಾ’. ಈ ಹಿಂದೆ ಹಾರರ್‌ ಚಿತ್ರವನ್ನು ತೆರೆಗೆ ತಂದು ಸಕ್ಸಸ್‌ ಆಗಿರುವ ನಿರ್ದೇಶಕ ಅಶೋಕ ಕೆ.ಎಸ್‌ ಈ ಬಾರಿ “ದಿಯಾ’ ಎನ್ನುವ ಸಸ್ಪೆನ್ಸ್‌ ಕಂ ಲವ್‌-ಥ್ರಿಲ್ಲರ್‌ ಕಥೆಯನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ.

Advertisement

“ಶ್ರೀ ಸ್ವರ್ಣಲತಾ ಪ್ರೊಡಕ್ಷನ್ಸ’ ಬ್ಯಾನರನಲ್ಲಿ ಕೃಷ್ಣ ಚೈತನ್ಯ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ನವ ಪ್ರತಿಭೆ ದೀಕ್ಷಿತ್‌, ಖುಷಿ, ಪೃಥ್ವಿ ಅಂಬಾರ್‌, ಪವಿತ್ರ ಲೋಕೇಶ್‌ ಮೊದಲಾದವರು “ದಿಯಾ’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಿಡುಗಡೆಗೂ ಮುನ್ನ ಮಾಧ್ಯಮಗಳ ಮುಂದೆ ಬಂದಿದ್ದ ಚಿತ್ರತಂಡ “ದಿಯಾ’ ಚಿತ್ರದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಅಶೋಕ ಕೆ.ಎಸ್‌, “ಇದೊಂದು ಲವ್‌ ಕಂ ಸಸ್ಪೆನ್ಸ್‌ – ಥ್ರಿಲ್ಲರ್‌ ಶೈಲಿಯ ಸಿನಿಮಾ. ಇಡೀ ಸಿನಿಮಾ ಪ್ರಮುಖವಾಗಿ ಮೂರು ಪಾತ್ರಗಳ ಸುತ್ತ ನಡೆಯುತ್ತದೆ. ಸೈಕಾಲಜಿಕಲ್‌ ಎಳೆಯನ್ನ ಇಟ್ಟುಕೊಂಡು, ಒಂದು ಲವ್‌ ಸ್ಟೋರಿಯನ್ನ ಇಂದಿನ ಆಡಿಯನ್ಸ್‌ಗೆ ಇಷ್ಟವಾಗುವಂತೆ ತೆರೆಮೇಲೆ ತರುತ್ತಿದ್ದೇವೆ. ಇಡೀ ಚಿತ್ರದಲ್ಲಿ ಎಲ್ಲೂ ಹಾಡುಗಳಿಲ್ಲ. ಚಿತ್ರಕಥೆ, ನಿರೂಪಣೆ, ಹಿನ್ನೆಲೆ ಸಂಗೀತ, ಛಾಯಾಗ್ರಹಣ ಇವುಗಳ ಮೂಲಕವೇ ಸಿನಿಮಾವನ್ನು ಆಕರ್ಷಣೀಯವಾಗಿ ಕಟ್ಟಿಕೊಟ್ಟಿದ್ದೇವೆ.

ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಸಿನಿಮಾವಾಗಿದ್ದು, ಆಡಿಯನ್ಸ್‌ಗೆ ಖಂಡಿತ ಇಷ್ಟವಾಗುತ್ತದೆ’ ಎಂಬ ಭರವಸೆಯನ್ನು ವ್ಯಕ್ತಪಡಿಸಿದರು. ಚಿತ್ರದ ಬಗ್ಗೆ ಮಾತನಾಡಿದ ನಟ ದೀಕ್ಷಿತ್‌, “ಇದು ನಿತ್ಯ ಜೀವನದಲ್ಲಿ ನಮ್ಮ ನಡವೆಯೇ ನಡೆಯುವಂಥ ಕಥೆ. ಇದರಲ್ಲಿ ನಾನು ಎಂ.ಟೆಕ್‌ ಮಾಡುವ ಹುಡುಗನ ಪಾತ್ರ ಮಾಡಿದ್ದೇನೆ. ಚಿತ್ರದಲ್ಲಿ ಕಥೆಗೆ ತಿರುವು ಕೊಡುವ ಪಾತ್ರ ನನ್ನದು’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. ಚಿತ್ರದ ಬಗ್ಗೆ ಮಾತನಾಡಿದ ನಟಿ ಖುಷಿ, “ಯಾರ ಜೊತೆಗೂ ಹೆಚ್ಚು ಬೆರೆಯದ ತುಂಬಾ ರಿಸರ್ವ್‌ ಆಗಿರುವಂಥ ಹುಡುಗಿಯ ಪಾತ್ರ ನನ್ನದು.

ಇದೊಂದು ಮಹಿಳಾ ಪ್ರಧಾನ ಕಥೆ ಇರುವ ಚಿತ್ರ. ಇಡೀ ಚಿತ್ರ ನನ್ನ ಪಾತ್ರದ ಸುತ್ತ ಸಾಗುತ್ತದೆ’ ಎಂದು ವಿವರಣೆ ಕೊಟ್ಟರು. ಮತ್ತೂಬ್ಬ ನಟ ಪೃಥ್ವಿ “ನನ್ನದು ತುಂಬ ಚೆನ್ನಾಗಿ ಮಾತನಾಡುವಂಥ ಲೈವ್ಲಿಯಾಗಿರುವ ಹುಡುಗನ ಪಾತ್ರ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು. “ದಿಯಾ’ ಚಿತ್ರದ ಶೀರ್ಷಿಕೆಗೆ ಲೈಫ್ ಈಸ್‌ ಫ‌ುಲ್‌ ಆಫ್ ಸರ್‌ಪ್ರೈಸ್‌’ ಎಂಬ ಅಡಿ ಬರಹವಿದೆ. “ಚಿತ್ರದಲ್ಲಿ ಅನೇಕ ಸರ್‌ಪ್ರೈಸ್‌ಗಳನ್ನು ಪ್ರೇಕ್ಷಕರು ನಿರೀಕ್ಷಿಸಬಹುದು.

Advertisement

ಇಡೀ ಚಿತ್ರತಂಡದ ಪ್ರಯತ್ನದಿಂದ, ಯಾರಿಗೂ ಬೋರಾಗದಂಥ ಒಂದೊಳ್ಳೆ ಸಿನಿಮಾ ಮಾಡಿದ್ದೇವೆ’ ಎಂದರು ನಿರ್ಮಾಪಕ ಕೃಷ್ಣ ಚೈತನ್ಯ. “ದಿಯಾ’ ಚಿತ್ರಕ್ಕೆ ವಿಶಾಲ ವಿಟಲ, ಸೌರಭ ವಾಘಮರೆ ಛಾಯಾಗ್ರಹಣವಿದೆ. ನವೀನ ರಾಜ್‌ ಸಂಕಲನವಿದೆ. ಚಿತ್ರಕ್ಕೆ ಅಜನೀಶ ಲೋಕನಾಥ ಹಿನ್ನಲೆ ಸಂಗೀತ ನೀಡಿದ್ದಾರೆ. ಬೆಂಗಳೂರು, ಮುಂಬೈ, ಉಡುಪಿ, ಮಂಗಳೂರು ಸುತ್ತಮುತ್ತ “ದಿಯಾ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. “ದಿಯಾ’ ಇಂದು (ಫೆ. 7ಕ್ಕೆ) ರಾಜ್ಯಾದ್ಯಂತ ಸುಮಾರು 100 ಕೇಂದ್ರಗಳಲ್ಲಿ ಬಿಡುಗಡೆಯಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next