Advertisement

ಎಲ್ಲಕ್ಕೂ ಮಹಾಭಿಯೋಗ ಉತ್ತರವಲ್ಲ

07:00 AM Apr 08, 2018 | Team Udayavani |

ನವದೆಹಲಿ: “ಎಲ್ಲ ಪ್ರಶ್ನೆಗಳು ಅಥವಾ ಸಮಸ್ಯೆಗಳಿಗೆ ಮಹಾಭಿಯೋಗ ಒಂದೇ ಪರಿಹಾರವಲ್ಲ. ಇಲ್ಲಿ ವ್ಯವಸ್ಥೆಯನ್ನು ಸರಿಪಡಿಸ ಬೇಕಾದ್ದು ಮುಖ್ಯವಾಗುತ್ತದೆ.’ ಸಿಜೆಐ ದೀಪಕ್‌ ಮಿಶ್ರಾ ವಿರುದ್ಧ ಪ್ರತಿ ಪಕ್ಷಗಳು ಮಹಾಭಿಯೋಗ ಪ್ರಕ್ರಿಯೆಗೆ ಮುಂದಾಗಿರುವ ಕುರಿತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಜೆ. ಚೆಲಮೇಶ್ವರ್‌ ಈ ರೀತಿ ಪ್ರತಿಕ್ರಿಯಿಸಿದ್ದಾರೆ.  

Advertisement

ಕಳೆದ ಜನವರಿಯಲ್ಲಿ ಸಿಜೆಐ ಮಿಶ್ರಾ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್ಗಳಲ್ಲಿ ಒಬ್ಬರಾದ ನ್ಯಾ.ಚೆಲಮೇಶ್ವರ್‌ ಶನಿವಾರ ದೆಹಲಿಯ ಹಾರ್ವರ್ಡ್‌ ಕ್ಲಬ್‌ನಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಪ್ರಕರಣಗಳನ್ನು ವಿವಿಧ ನ್ಯಾಯಪೀಠಗಳಿಗೆ ಹಂಚಿಕೆ ಮಾಡುವ ಅಧಿಕಾರವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಅತ್ಯಂತ ಜವಾಬ್ದಾರಿ ಯಿಂದ ನಿಭಾಯಿಸಬೇಕು. ಕೇಸುಗಳನ್ನು ತಮ್ಮ ಆದ್ಯತೆಯ ಪೀಠಗಳಿಗೆ ಹಂಚಿದರೆ, ನ್ಯಾಯಾಂಗ ವ್ಯವಸ್ಥೆಯ ಮೇಲೆ ದೇಶದ ಜನರಿಗಿರುವ ನಂಬಿಕೆಯೇ ನಾಶವಾಗುತ್ತದೆ’ ಎಂದು ಅವರು ಹೇಳಿದ್ದಾರೆ. ಜತೆಗೆ, ತಾವು ಜೂನ್‌ 22ರಂದು ನಿವೃತ್ತಿ ಯಾಗಲಿದ್ದು, ನಿವೃತ್ತಿ ನಂತರ ಸರಕಾರದ ಉದ್ಯೋಗ ವನ್ನೂ ಸ್ವೀಕರಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next